ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಮಾದಕ ವಸ್ತುವಾದ MDMA ಮಾರಾಟ ಮಾಡುತ್ತಿದ್ದ ನೈಜೀರಿಯಾ ಮೂಲದ ಅಂತರರಾಷ್ಟ್ರೀಯ ಆರೋಪಿ ಬಂಧನ .ಆರೋಪಿಯಿಂದ ಸುಮಾರು 5,46,000/-ರೂ ಬೆಲೆಬಾಳುವ ಮಾದಕ ವಸ್ತು ಮತ್ತು ದ್ವಿಚಕ್ರ ವಾಹನ ವಶ
ಮಡಿವಾಳ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನಾಗರಾಜ್ ಎಸ್ ಶೆಟ್ಟರ್ ಅವರು ಸಿಬ್ಬಂದಿಗಳೊಂದಿಗೆ ಗಸ್ತಿನಲ್ಲಿರುವಾಗ ಠಾಣಾ ವ್ಯಾಪ್ತಿಯ ಬಿ .ಟಿ ಎಂ .ಲೇಔಟ್ ,1ನೇ ಹಂತ ,29ನೇ ಮೇನ್ ನಲ್ಲಿರುವ ಬ್ಯಾಂಕ್ ಆಫ್ ಬರೋಡಾ ಮುಂಭಾಗ ಒಬ್ಬ ಆಸಾಮಿಯನ್ನು 1ದ್ವಿಚಕ್ರ ವಾಹನ ನಿಲ್ಲಿಸಿಕೊಂಡು ಮಾದಕ ವಸ್ತುವಾದ MDMA ಅನ್ನೋ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ವೇಳೆಯಲ್ಲೇ ಆತನನ್ನು ವಾಹನ ಸಮೇತ ಸುತ್ತುವರೆದು ಹಿಡಿದು ಪಂಚರ ಸಮಕ್ಷಮ ದಾಳಿ ಮಾಡಿ ಆತನ ವಶದಲ್ಲಿದ್ದ ಸುಮಾರು 5,46,000/-ರೂ ಬೆಲೆ ಬಾಳುವ ಮಾದಕ ವಸ್ತುವಾದMDMA ಮತ್ತೆ 1ದ್ವಿಚಕ್ರವಾಹನವನ್ನು ಅಮಾನತುಪಡಿಸಿ ಕೊಂಡಿರುತ್ತಾರೆ .ಈ ಮಾದಕ ವಸ್ತುವನ್ನು ಕಾಲೇಜಿನ ವಿದ್ಯಾರ್ಥಿಗಳಿಗೆ ಮತ್ತು ಐ.ಟಿ. ಬಿ.ಟಿ ಕಂಪನಿಯ ಉದ್ಯಮಿಗಳಿಗೆ ಮಾರಾಟ ಮಾಡಿಕೊಂಡು ಬೆಂಗಳೂರಿನಲ್ಲಿ ವಿಲಾಸಿ ಜೀವನ ನಡೆಸುತ್ತಿರುವುದಾಗಿ ತಿಳಿದು ಬಂದಿದ್ದು ,ಈ ಸಮಯವನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತಾರೆ .


ಈ ಪ್ರಕರಣದ ಕಾರ್ಯಾಚರಣೆಯನ್ನು ಬೆಂಗಳೂರು ನಗರದ ಆಗ್ನೇಯ ವಿಭಾಗದ ಉಪ ಪೊಲೀಸ್ ಕಮೀಷನರ್ ಅವರ ಶ್ರೀಯುತ. ಶ್ರೀನಾಥ್ ಮಹಾದೇವ್ ಎಂ. ಜೋಷಿ ರವರ ನಿರ್ದೇಶನದಲ್ಲಿ ಮಡಿವಾಳ ಉಪವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಶ್ರಯುತ. ಸುಧೀರ್ ಎಂ. ಹೆಗ್ಡೆ ರವರುಗಳ ಮಾರ್ಗದರ್ಶನದಲ್ಲಿ ,ಮಡಿವಾಳ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಸುನೀಲ್ ವೈ ನಾಯಕ್ ರವರ ನೇತೃತ್ವದಲ್ಲಿ ತಂಡ ಪಿ. ಎಸ್. ಐ. ಶ್ರೀ ಪ್ರಕಾಶ್ ಕೆ ಬಿ ,ಶ್ರೀ .ನಾಗರಾಜ್ ಎಸ್. ಶೆಟ್ಟರ್ ,ಎ. ಎಸ್ .ಐ. ಶ್ರೀ .ರೇವಣ್ಣ ,ಮತ್ತು ಸಿಬ್ಬಂದಿಯವರಾದ ಶ್ರೀ ವೆಂಕಟೇಶ್ ಶ್ರೀ ನಾರಣಪ್ಪ ಶ್ರೀ ಹರಿನಾಥ್ ಶ್ರೀ ಕಿರಣ್ ಕುಮಾರ್ ರವರುಗಳು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

ಜೆ .ಜಾನ್ ಪ್ರೇಮ್