ಪಿರ್ಯಾದಿದಾರರಾದ ಮಂಜುನಾಥ ಮರಬದ, ಪೊಲೀಸ್ ಉಪನಿರೀಕ್ಷಕರು (ಕಾ&ಸು) ಶಿರ್ವ ಪೊಲೀಸ್ ಠಾಣೆ ಇವರು ದಿನಾಂಕ 09/11/2025 ರಂದು ಠಾಣಾ ಸಿಬ್ಬಂದಿಗಳೊಂದಿಗೆ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ರಾತ್ರಿ 11:30 ಗಂಟೆಗೆ ಕಾಪು ತಾಲೂಕು ಶಿರ್ವ ಗ್ರಾಮದ ಇರ್ಮಿಂಜ ಚರ್ಚ್ ಸಮೀಪ ಹಾದು ಹೋಗಿರುವ ಸಾರ್ವಜನಿಕ ರಸ್ತೆಯ ಬಳಿ ಬೀದಿ ದೀಪದ ಕೆಳಗೆ ನೆಲದಲ್ಲಿ ಕುಳಿತು ಹಣವನ್ನು ಪಣವಾಗಿ ಇಡುತ್ತಾ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ 1)ನಿಂಗಪ್ಪ ಗಡ್ಡದವರ(37), ತಂದೆ: ಹನುಮಂತಪ್ಪ, ವಾಸ: # 3/1 ಆಡೂರು ಗ್ರಾಮ, ಹಾನಗಲ್ ತಾಲೂಕು, ಹಾವೇರಿ ಜಿಲ್ಲೆ, 2) ನಿಂಗಪ್ಪ ಅಂಬಿಗೇರ(23), ತಂದೆ: ತಿಪ್ಪೇಶಿ, ವಾಸ: ಮನೆ ನಂಬ್ರ: # 47, ಆಡೂರ ಗ್ರಾಮ, ಹಾನಗಲ್ ತಾಲೂಕು, ಹಾವೇರಿ ಜಿಲ್ಲೆ, 3) ರಾಘವೇಂದ್ರ ಸಣ್ಣತಂಗೇರ(28), ತಂದೆ: ದಿ: ಚಂದ್ರಪ್ಪ, ವಾಸ: ಹಿರೆ ಮಲ್ಲೂರು ಗ್ರಾಮ, ಶಿಗ್ಗಾಂವಿ ತಾಲೂಕು, ಹಾವೇರಿ ಯವರನ್ನು ವಶಕ್ಕೆ ಪಡೆದು ಅವರಿಂದ ಇಸ್ಪೀಟ್ ಜುಗಾರಿ ಆಟಕ್ಕೆ ಉಪಯೋಗಿಸಿದ ಇಸ್ಪೀಟ್ ಎಲೆಗಳು – 52, ನಗದು ರೂ. 1,900/- ಒಂದು ಹಳೆಯ ದಿನ ಪತ್ರಿಕೆ ಯನ್ನು ಸ್ವಾಧೀನಪಡಿಸಿ ಕೊಂಡಿದ್ದಾಗಿರುತ್ತದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 78/2025 ಕಲಂ: 87 KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







