ದಿನಾಂಕ 15/11/2025 ರಂದು 18:30 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮನೋಳಿ ಗುಜ್ಜಿ ಬೆಟ್ಟು ಮನೆ ಒಂದರಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ದೊರೆತ ಮಾಹಿತಿಯಂತೆ, ಅನಿಲ್ ಎಂ ಡಿ, ಪೊಲೀಸ್ ಉಪನಿರೀಕ್ಷಕರು, ಮಣಿಪಾಲ ಪೊಲೀಸ್ ಠಾಣೆ ಇವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿ, ಇಸ್ಪೀಟ್ ಆಡುತ್ತಿದ್ದ 1) ನವೀನ್ (37), 2) ಭಾಸ್ಕರ್ (55), 3) ಕೃಷ್ಣ (27), 4) ಜಗದೀಶ, 5) ಸಂತೋಷ್ (42), 6) ಶಂಕರ ಪೂಜಾರಿ (42), 7) ಮಂಜುನಾಥ್ (37) 8) ಶಿವಯ್ಯ (36) ಇವರನ್ನು ಹಾಗೂ ಜೂಜಾಟಕ್ಕೆ ಬಳಸಿದ ರೂ. 1,02,060/- , 52 ಇಸ್ಪೀಟ್ ಎಲೆಗಳು, 7 ಮೊಬೈಲ್ ಫೋನ್ಗಳು, ಕಂದು ಕಪ್ಪು ಡಿಸೈನ್ ಇರುವ ಬೆಡ್ಶೀಟ್-1 ಹಾಗೂ 2 ಮೋಟಾರು ಸೈಕಲ್ ಹಾಗೂ 1 ಕಾರನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 79/2023 ಕಲಂ: 80 KP Act ರಂತೆ ಪ್ರಕರಣ ದಾಖಲಾಗಿರುತ್ತದೆ.

ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







