ದಿನಾಂಕ 11.10.2025 ರಂದು ಗೊಳಿಹೋಳೆ ಗ್ರಾಮದ ಬಡ್ಕಿ ಎಂಬಲ್ಲಿ ಸರಕಾರಿ ಜಾಗದಲ್ಲಿ ಅಕ್ರಮ ಕೆಂಪುಕಲ್ಲು ಗಣಿಕಾರಿಕೆ ನಡೆಸುತ್ತಿದ್ದಾರೆ ಎಂಬ ಮಾಹಿತಿಯಂತೆ ಸ್ಥಳಕ್ಕೆ ಹೋಗಿ ನೊಡಲಾಗಿ ಕೆಂಪು ಕಲ್ಲು ಗಣಿಗಾರಿಕೆ ಮಾಡುತ್ತಿರುವುದು ಕಂಡು ಬಂದಿದ್ದು, ಪಿರ್ಯಾದಿ ತಿಮ್ಮೇಶ ಬಿ. ಎನ್., ಪೊಲೀಸ್ ಉಪನಿರೀಕ್ಷಕರು ಬೈಂದೂರು ಪೊಲೀಸ್ ಠಾಣೆ ಇವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿದಾಗಿದ್ದು, ಸ್ಥಳದಲಿದ್ದ ವ್ಯಕ್ತಿಯನ್ನು ವಿಚಾರಿಸಿದಾಗ ತನ್ನ ಹೆಸರು ಮನೋಜ ಮೊಗವೀರ(43), ತಂದೆ; ನರಸಿಂಹ ಮೊಗವೀರ, ವಾಟೆಕಾಡು, ಆಲೂರು ಗ್ರಾಮ ಕುಂದಾಪುರ ಎಂಬುದಾಗಿ ತಿಳಿಸಿದ್ದು ಅತನಲ್ಲಿ ಜಾಗದ ಬಗ್ಗೆ ವಿಚಾರಿಸಿದಾಗ ಇದು ಸರಕಾರಿ ಜಾಗ ವಾಗಿರುವುದಾಗಿ ತಿಳಿಸಿರುತ್ತಾರೆ. ಅವರಲ್ಲಿ ಕಲ್ಲು ಕೊರೆ ಮಾಡಲು ಪರವಾನಿಗೆ ಕೇಳಲಾಗಿ ಯಾವುದೇ ಪರವಾನಿಗೆ ಇರುವುದಿಲ್ಲವಾಗಿ ತಿಳಿಸಿರುವುದಾಗಿರುತ್ತದೆ. ಫಿರ್ಯಾಧಿದಾರರು ಪಂಚರ ಸಮಕ್ಷಮ ಸದ್ರಿ ಸ್ಥಳ ಪರಿಶೀಲಿಸಲಾಗಿ ಸುಮಾರು 60*40 ಉದ್ದ ಅಗಲದ ವಿಸ್ತಿರಣದ ಜಾಗದಲ್ಲಿ ನೆಲದಿಂದ ಸುಮಾರು 3 ಅಡಿ ಅಳದಲ್ಲಿ ಸುಮಾರು 60 ಅಡಿ ಉದ್ದ ಮತ್ತು 40 ಅಡಿ ಅಗಲದಲ್ಲಿ ಕೆಂಪುಕಲ್ಲು ಗಣಿಗಾರಿಕೆ ನಡೆಸುತ್ತಿರುವುದು ಕಂಡು ಬಂದಿರುತ್ತದೆ. ಸ್ಥಳದಲ್ಲಿದ್ದ 1] SCBCH54 ಎಂದು ಬರೆದಿರುವ ಕಲ್ಲು ಕಟ್ಟಿಂಗ್ ಮಾಡುವ ಕೆಂಪು ಬಣ್ಣದ ಸಣ್ಣ ಟಿಲ್ಲರ್ -1 ಅಂದಾಜು ಮೌಲ್ಯ 35,000/- ರೂಪಾಯಿ 2] ಕಬ್ಬಿಣದ ಮೊಳೆಗಳು – 30 ಅಂದಾಜು ಮೌಲ್ಯ 400/- ರೂಪಾಯಿ ಮತ್ತು 3] ಕಬ್ಬಿಣದ ಸುತ್ತಿಗೆ -1 ಅಂದಾಜು ಮೌಲ್ಯ 100/- ರೂಪಾಯಿ ಸದ್ರಿ ಸ್ವತ್ತುಗಳ ಒಟ್ಟು ಅಂದಾಜು ಮೌಲ್ಯ ರೂ 35,500/- ಆಗಿರುತ್ತದೆ. ಅಪಾದಿತರಾದ ಮನೋಜ ಮೊಗವೀರ ಇತನು ಸುಮಾರಿ 2 ಅಡಿ ಅಳದಷ್ಟು 2 ಹಾಸ್ ಸುಮಾರು 300 ಕೆಂಪು ಕಲ್ಲು ಕಳವು ಮಾಡಿ ಮಾರಾಟ ಮಾಡಿರುವುದಾಗಿ ತಿಳಿಸಿರುತ್ತಾರೆ. ಅಲ್ಲದೇ ಅದೇ ಸ್ಥಳದಲ್ಲಿ ಇನ್ನು ಕೆಂಪು ಕಲ್ಲುಗಳನ್ನು ತೆಗೆಯಲು ಪ್ರಯತ್ನ ಮಾಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 177/2025 ಕಲಂ: 303 (2), 62 BNS & 4, 21 MMDR Act 1957ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ