ದಿನಾಂಕ 28/09/2025 ರಂದು ರಾತ್ರಿ 02:15 ಗಂಟೆಗೆ ಅಜೆಕಾರು ಪೊಲೀಸ್ ಠಾಣೆ ವ್ಯಾಪ್ತಿಯ ಶಿರ್ಲಾಲು ಗ್ರಾಮದ ಜಯಶ್ರೀ ಎನ್ನುವವರ ಮನೆಯ ದನದ ಕೊಟ್ಟಿಗೆಗೆ ಮೂವರು ಅಪರಿಚಿತ ವ್ಯಕ್ತಿಗಳು ತಲವಾರುಗಳೊಂದಿಗೆ ನುಗ್ಗಿ, ತಲವಾರು ತೋರಿಸಿ ಬೆದರಿಸಿ, ಕೊಟ್ಟಿಗೆಯಲ್ಲಿದ್ದ ಸುಮಾರು 35,000/- ರೂಪಾಯಿ ಮೌಲ್ಯದ 3 ಹಸುಗಳನ್ನು ಕಳ್ಳತನ ಮಾಡಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಅಜೆಕಾರು ಪೊಲೀಸ್ ಠಾಣೆ ಠಾಣಾ ಅಪರಾಧ ಕ್ರಮಾಂಕ : 29/2025 ಕಲಂ 329(3), 329(4), 309, 324(4), 3(5) BNS, ಕಲಂ 3,25 ಭಾರತೀಯ ಶಶ್ತ್ರಾಸ್ತ್ರ ಕಾಯ್ದೆ ಕಲಂ 11(1) (ಡಿ) ಪ್ರಾಣಿ ಹಿಂಸೆ ತಡೆ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ಆರೋಪಿ ಪತ್ತೆಯ ಬಗ್ಗೆ ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಡಾ. ಹರ್ಷಾ ಪ್ರಿಯಂವದಾ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖಾಧಿಕಾರಿಯಾದ ಮಂಜಪ್ಪ ಡಿ.ಆರ್ ರವರು ಅಜೆಕಾರು ಠಾಣಾ ಪಿ.ಎಸ್.ಐ ರವರ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿದ್ದು, ತನಿಖಾ ತಂಡವು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಪ್ರಕರಣದ ಆಪಾದಿತರಾದ 1)ಮೊಹಮ್ಮದ್ ಯೂನಿಸ್ @ ಯೂನಿಸ್ @ ಯೂನಸ್, ಪ್ರಾಯ: 31 ವರ್ಷ, ತಂದೆ: ಮೊಹಮ್ಮದ್ ವಾಸ: ದಡ್ಡಕಜೆ, ಬೋರ್ಕಟ್ಟೆ ಅಂಚೆ, ನಲ್ಲೂರು ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ
2) ಮೊಹಮ್ಮದ್ ನಾಸೀರ್ @ ನಾಸೀರ್ ಪ್ರಾಯ: 28 ವರ್ಷ, ತಂದೆ: ಇಸುಬು ವಾಸ: ನೀರಲ್ಕೆ ಹೌಸ್, ಕಲ್ಲಬೆಟ್ಟು ಗ್ರಾಮ, ಮೂಡುಬಿದ್ರೆ ತಾಲೂಕು, ಮಂಗಳೂರು ಜಿಲ್ಲೆ
3) ಮೊಹಮ್ಮದ್ ಇಕ್ಬಾಲ್ @ ಇಕ್ಕು, ಪ್ರಾಯ:29 ವರ್ಷ, ತಂದೆ: ಉಮ್ಮರಬ್ಬ, ವಾಸ: ಹಂಡೇಲು ಮನೆ, ಮಿಜಾರು ಅಂಚೆ, ಪುತ್ತಿಗೆ ಗ್ರಾಮ, ಮೂಡಬಿದ್ರೆ ತಾಲೂಕು ಎಂಬುವವರನ್ನು ವಶಕ್ಕೆ ಪಡೆದು, ಆಪಾದಿತರ ವಶದಲ್ಲಿದ್ದ ಕೃತ್ಯಕ್ಕೆ ಬಳಸಿದ್ದ 2 ತಲವಾರು, ಮಾರುತಿ ಸುಜುಕಿ ಸ್ವಿಫ್ಟ್ ಕಾರು, ಮಹೀಂದ್ರಾ ಬೋಲೆರೋ ವಾಹನ, ಕೃತ್ಯದ ಸಮಯ ಪಯೋಗಿಸಿದ್ದ 5 ಮೊಬೈಲ್ ಫೋನ್ ಗಳನ್ನು ಸ್ವಾದೀನಪಡಿಸಿಕೊಂಡಿದ್ದು ಸ್ವಾದೀನಪಡಿಸಿಕೊಂಡ ಸ್ವತ್ತುಗಳ ಒಟ್ಟು ಮೌಲ್ಯ 5,87,000/- ಆಗಿರುತ್ತದೆ.
ಕಾರ್ಯಾಚರಣೆಯಲ್ಲಿ ಅಜೆಕಾರು ಪೊಲೀಸ್ ಠಾಣಾ ಪಿ.ಎಸ್.ಐ ಮಹೇಶ್ ಟಿ.ಎಮ್, ಸಿಬ್ಬಂದಿಯವರಾದ ಸತೀಶ್ ಬೆಳ್ಳೆ, ಪ್ರದೀಪ್ ಶೆಟ್ಟಿ, ಮೂರ್ತಿ ಕೆ. ಹೆಬ್ರಿ ಠಾಣಾ ಸಿಬ್ಬಂದಿ ಸುಜೀತ್ ಕುಮಾರ್, ಕಾರ್ಕಳ ಗ್ರಾಮಾಂತರ ಠಾಣೆಯ ಮಹಾಂತೇಶ್ ಕಾರ್ಕಳ ವೃತ್ತ ನಿರೀಕ್ಷಕರ ಕಚೇರಿಯ ವಿಶ್ವನಾಥ ಮತ್ತು ಶಶಿಕುಮಾರ್ ಭಾಗವಹಿಸಿರುತ್ತಾರೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ