ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಡ್ಯ ಜಿಲ್ಲೆ ವತಿಯಿಂದ ಹಾಗೂ ಮಂಡ್ಯ ಪೊಲೀಸರ ಸಭೆ

ದಿಃ-09-09-2023 ರಂದು ರಾಷ್ಟ್ರೀಯ ಲೋಕ ಅದಾಲತ್‌ ಆಯೋಜನೆ ಮಾಡಿದ್ದು ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಬಾಕಿ ಇರುವ (NI Act, traffic Challan cases, Compoundable cases) ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜಿ ಮಾಡುವುದರ ಮೂಲಕ ಪ್ರಕರಣ ಇತ್ಯರ್ಥ ಪಡಿಸಿ ಲೋಕಾ ಅದಾಲತ್‌ ಯಶಸ್ವಿಗೊಳಿಸಲು ಪೂರ್ವಭಾವಿಯಾಗಿ ಚರ್ಚಿಸಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕೊಠಡಿಯಲ್ಲಿ ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಅಧ್ಯಕ್ಷರು ಜಿ.ಕಾ.ಸೇ.ಪ್ರಾ ರವರ ಅಧ್ಯಕ್ಷತೆಯಲ್ಲಿ ಸಭೆಯನ್ನು ಹಮ್ಮಿಕೊಂಡಿದ್ದು. […]

ಮಂಡ್ಯ ಜಿಲ್ಲಾ ಪೊಲೀಸರಿಂದ ಜಿಲ್ಲಾ ಮಟ್ಟದ ವಾರದ ಕವಾಯತು

ಮಂಡ್ಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಮಟ್ಟದ ವಾರದ ಕವಾಯತು ಕೈಗೊಂಡಿದ್ದು ಪೊಲೀಸ್‌ ಅಧೀಕ್ಷಕರಾದ ಶ್ರೀ ಯತೀಶ್.ಎನ್ ಐಪಿಎಸ್ ರವರು ಗೌರವ ವಂದನೆಯನ್ನು ಸ್ವೀಕರಿಸಿ ಕವಾಯತನ್ನು ವೀಕ್ಷಿಸಿಸಿದರು. ನಂತರ ಠಾಣೆಗೆ ಬರುವ ಸಾರ್ವಜನಿಕರೊಡನೆ ಸೌಜನ್ಯದಂತೆ ನಡೆದುಕೊಳ್ಳವಂತೆ ಹಾಗೂ ಠಾಣೆಗಳಲ್ಲಿ ಸಿಬ್ಬಂದಿಗಳು ತಮ್ಮ ಬೀಟ್‌ ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸಲು ಸೂಚಿಸಿದರು. ಕವಾಯಿತಿನಲ್ಲಿ ಹಾಜರಿದ್ದ ಅಧಿಕಾರಿ & ಸಿಬ್ಬಂದಿಗಳ ಕುಂದುಕೊರತೆಗಳ ಬಗ್ಗೆ ವಿಚಾರಿಸಿದರು.

ಮಂಡ್ಯ ಜಿಲ್ಲಾ ಪೊಲೀಸರಿಂದ ಸೂಚನೆ

ಈ ದಿನ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಮಟ್ಟದ ಕವಾಯತು ಕೈಗೊಂಡಿದ್ದು ಪೊಲೀಸ್‌ ಅಧೀಕ್ಷಕರಾದ ಶ್ರೀ ಯತೀಶ್.ಎನ್ ಐಪಿಎಸ್ ರವರು ಗೌರವ ವಂದನೆಯನ್ನು ಸ್ವೀಕರಿಸಿ ಕವಾಯತನ್ನು ವೀಕ್ಷಿಸಿಸಿ, ಚುನಾವಣಾ ಬಂದೋಬಸ್ತ್‌ ಕರ್ತವ್ಯವನ್ನು ಯಶಶ್ವಿಯಾಗಿ ನಿರ್ವಹಿಸಿದ ಜಿಲ್ಲೆಯ ಎಲ್ಲಾ ಆಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಶ್ಲಾಘಿಸಿ, ತಮ್ಮ ಕರ್ತವ್ಯದಲ್ಲಿ ಜನಸ್ನೇಹಿ ವರ್ತನೆಯನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡು ಠಾಣೆಗಳಿಗೆ ನೊಂದು ಬರುವ ಸಾರ್ವಜನಿಕರೊಡನೆ ಸೌಜನ್ಯ ವಾಗಿ ವರ್ತಿಸಿ,ಯಾವುದೇ ವಿಳಂಬಮಾಡದೆ ದೂರುಗಳನ್ನು ದಾಖಲಿಸುವಂತೆ ಸೂಚಿಸಿದರು. ಎ.ಎಸ್.ಪಿ […]

ಮಂಡ್ಯ ಜಿಲ್ಲಾ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ

ಮಂಡ್ಯ ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ ಮೊ.ಸಂ.26/22 ಕಲಂ 379 ಐಪಿಸಿ ಪ್ರಕರಣದಲ್ಲಿ 5 ಜನ ಕುಖ್ಯಾತ ದ್ವಿಚಕ್ರ ವಾಹನ ಕಳ್ಳರ ಬಂಧನ ಒಟ್ಟು ಮೌಲ್ಯ 6 ಲಕ್ಷ ಮೌಲ್ಯದ 11 ದ್ವಿಚಕ್ರ ವಾಹನಗಳ ವಶ, ಆರೋಪಿಗಳು ಮತ್ತು ಮಾಲು ಪತ್ತೆ ಕಾರ್ಯದಲ್ಲಿ ಶ್ರಮಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವನ್ನು ಮಾನ್ಯ ಎಸ್.ಪಿ. ಮಂಡ್ಯ ರವರು ಪ್ರಶಂಸಿರುತ್ತಾರೆ

ಮಂಡ್ಯ ಜಿಲ್ಲಾ ಪೊಲೀಸರಿಂದ ವ್ಯಾಪಾರಿಗಳಿಗೆ ಸಾರ್ವಜನಿಕರ ಸುರಕ್ಷತಾ ಕಾಯ್ದೆಗೆ ಅಧಿಸೂಚನೆ

ಸಾರ್ವಜನಿಕ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ನಾಗರಿಕರಿಗೆ ಹೆಚ್ಚು ಭದ್ರತೆ ನೀಡುವ ಸಲುವಾಗಿ “ಕರ್ನಾಟಕ ನಾಗರಿಕ ಸುರಕ್ಷತಾ ಕಾಯಿದೆ “ಸರ್ಕಾರವು ಅದಕ್ಕೆ ನಿಯಮಾವಳಿ ರೂಪಿಸಿ ಅಧಿಸೂಚನೆ ಹೊರಡಿಸಿದೆ .ವೀಡಿಯೊ ತುಣುಕುಗಳನ್ನು 30 ದಿನಗಳು ಶೇಖರಿಸುವ ಸಾಮಥ್ರ್ಯವುಳ್ಳ ಸಿ.ಸಿ.ಟಿ.ವಿ ಕ್ಯಾಮೆರಾ ಗಳನ್ನು ಅಳವಡಿಸಬೇಕು . ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತಾ ಕ್ರಮವಾಗಿ ಸಿ.ಸಿ.ಟಿವಿ ಅಳವಡಿಕೆಯಂತಹ ಸಾರ್ವಜನಿಕ ನಿಗಾ ವ್ಯವಸ್ಥೆ ಅಳವಡಿಸಲು ಹಾಗೂ ಅಗತ್ಯ ಸಂದರ್ಭಗಳಲ್ಲಿ ಪೊಲೀಸರಿಗೆ ಈ ದೃಶ್ಯ ದಾಖಲೆಗಳು ಸಹಾಯಕವಾಗಿದೆಮಂಡ್ಯ ನಗರದ ಅಂಬೇಡ್ಕರ್ […]

ಮಂಡ್ಯ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ

ಮಂಡ್ಯ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ-2020 ಅನ್ನು ಈ ದಿನ ಮಂಡ್ಯ ಡಿಎಆರ್ ಪೆರೆಡ್ ಮೈದಾನದಲ್ಲಿ ಮಾನ್ಯ ಮಂಡ್ಯ ಪ್ರಧಾನ ಜಿಲ್ಲಾ & ಸತ್ರ ನ್ಯಾಯಾಧೀಶರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಮಂಡ್ಯ, ಪೊಲೀಸ್‌ ಅಧೀಕ್ಷಕರು ಮಂಡ್ಯ, ಅಪರ ಪೊಲೀಸ್‌ ಅಧೀಕ್ಷಕರು ಮಂಡ್ಯ ರವರು ಹಾಗೂ ಜಿಲ್ಲೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿರವರು ಪಾಲ್ಗೊಂಡಿರುತ್ತಾರೆ. ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ, ಜೆ .ಜಾನ್ ಪ್ರೇಮ್

Get News on Whatsapp

by send "Subscribe" to 7200024452
Close Bitnami banner
Bitnami