ಕೊಲೆ ಪ್ರಕರಣದಲ್ಲಿ ಆರೋಪಿ ವಶ ದಿನಾಂಕ: 22.04.2022 ರಂದು ದೂರುದಾರರಾದ ಶ್ರೀ.ವೆಂಕಟೇಶ್.ಸಿ. ಬಿನ್.ಲೇಟ್.ಚಿನ್ನಪ್ಪ, ವಾಸ: ಕೆರೆಕೋಡಿ, ಬಂಗಾರಪೇಟೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶದಲ್ಲಿ ತನ್ನ ಮಗನಾದ ಹರೀಶ್ @ ಕಬಾಬ್ ಎಂಬಾತನನ್ನು ಬಂಗಾರಪೇಟೆಯ ಕಾರಹಳ್ಳಿ ರುದ್ರಭೂಮಿ (ಸ್ಮಶಾನ) ದ ಬಳಿ ಯಾರೋ ದುಷ್ಕರ್ಮಿಗಳು ಕೊಲೆ ಮಾಡಿದ್ದು, ಈ ಬಗ್ಗೆ ನೀಡಿದ ದೂರಿನ ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತೆ. ಸದರಿ ಪ್ರಕರಣದಲ್ಲಿ ಮೃತನಾದ ಹರೀಶ್ @ […]
Kgf District Police
ಲಾಭಕ್ಕಾಗಿ ಒಂಟಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗಳ ಬಂಧನ
ದಿನಾಂಕ 15.07.2022 ರಂದು ರಾತ್ರಿ ಸುಮಾರು 7.15 ಗಂಟೆಗೆ ಆಂಡ್ರಸನ್ಪೇಟೆ ಪೊಲೀಸ್ ಠಾಣಾ ಸರಹದ್ದು ಪಚ್ಚಪ್ಪ ಸ್ಟ್ರೀಟ್ನಲ್ಲಿ ಅಪರಿಚಿತ ವ್ಯಕ್ತಿಗಳು ಸುಲೋಚನ ಎಂಬ 52 ವರ್ಷ ವಯಸ್ಸಿನ ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಆಕೆಯ ಕತ್ತಿನಲ್ಲಿದ್ದ 1,20,000/- ರೂ ಬೆಲೆ ಬಾಳುವ ಸುಮಾರು 40 ಗ್ರಾಂ ತೂಕದ ಬಂಗಾರದ ಮಾಂಗಲ್ಯದ ಸರವನ್ನು ಒಂದು ಮೊಬೈಲ್ ಪೋನ್ 15../- ನಗದು ಹಣವನ್ನು ದೋಚಿಕೊಂಡು ಹೋಗಿದ್ದು ಆಕೆಯ ಗಂಡ ಶ್ರೀ.ಶೇಗರ್ ಬಿನ್ ಲೇಟ್ […]
ಸುಲಿಗೆ ಪ್ರಕರಣದ ಆರೋಪಿಗಳು ವಶಕ್ಕೆ
ಕಾಮಸಮುದ್ರಂ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ದಿನಾಂಕ:18-07-2022 ರಂದು ತಮಿಳುನಾಡಿನ ಸೇಲಂ ನಿಂದ ಅಕ್ಕಿ ಮೂಟೆಗಳನ್ನು ತುಂಬಿದ್ದ ಲಾರಿ ಸಂಖ್ಯೆ ಟಿ.ಎನ್.28, ಎ.ಪಿ 9919 9919 ರಲ್ಲಿ ಬಂಗಾರಪೇಟೆಗೆ ಬಂದು ಪಿ.ಆರ್.ಎಸ್ ಮಿಲ್ ಗೆ ಹೋಗಿ ಅಕ್ಕಿ ಮೂಟೆಗಳನ್ನು ಅನ್ ಲೋಡ್ ಮಾಡಿ 4,34,500 ರೂಪಾಯಿಗಳನ್ನು ಪಡೆದು ಅದರಲ್ಲಿ ಡೀಸೆಲ್ ಖರ್ಚಿಗೆ 10000/-ರೂಗಳನ್ನು ತೆಗೆದುಕೊಂಡು ಉಳಿದ 4,24,500 ರೂ ಹಣದ ಬಂಡಲ್ ಅನ್ನು ಲಾರಿಯಲ್ಲಿನ ಸೇಫ್ಟಿ ಬಾಕ್ಸ್ ನಲ್ಲಿಟ್ಟು ಲಾರಿಯನ್ನು ಚಲಾಯಿಸಿಕೊಂಡು […]
ಕೋಲಾರ ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ: ರೂ. 40 ಲಕ್ಷ ಮೌಲ್ಯದ ಅಕ್ರಮ ಗಾಂಜಾ ವಶ ಒಬ್ಬನ ಬಂಧನ
ಕೋಲಾರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ದೇವರಾಜ್, ಐ.ಪಿ.ಎಸ್ ಹಾಗೂ ಹೆಚ್ವುವರಿ ಪೊಲೀಸ್ ಅಧೀಕ್ಷರಾದ ಶ್ರೀ ಸಚಿನ್ ಪಿ ಘೋರ್ಪಡೆ ರವರ ಮಾರ್ಗದರ್ಶನದಲ್ಲಿ ಕೋಲಾರ ಉಪವಿಭಾಗದ ಡಿ.ಎಸ್.ಪಿ ವಿ.ಲ್.ರಮೇಶ್ ಮತ್ತು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಬಿ.ಐಯ್ಯಣ್ಣರೆಡ್ಡಿ ಮತ್ತು ಸಿಬ್ಬಂದಿಯವರು ದಿನಾಂಕ 16-07-2022 ರಂದು ಬೆಳಗ್ಗೆ 07:45 ಗಂಟೆ ಸಮಯದಲ್ಲಿ ಕಾರ್ಯಾಚರಣೆ ನಡೆಸಿ ಕೋಲಾರ ಹೊರವಲಯದ ಎನ್.ಹೆಚ್ 75 ರಸ್ತೆಯ ಕೊಂಡರಾಜನಹಳ್ಳಿ ಗೇಟ್ ಬಳಿ ಟಾಟಾ ಇಂಡಿಕಾ […]
ಅಕ್ರಮ ಗೋ ಸಾಗಾಣೆ ಪ್ರಕರಣ ದಾಖಲು ಆರೋಪಿಗಳು ವಶ
ದಿನಾಂಕ: 13.07.2022 ರಂದು ಡಾ|| ಕೆ. ಧರಣಿದೇವಿ, ಮಾನ್ಯ ಪೊಲೀಸ್ ಅಧೀಕ್ಷಕರು, ಕೆ.ಜಿ.ಎಫ್. ಮತ್ತು ಶ್ರೀ. ಪಿ.ಮುರಳೀಧರ, ಡಿ.ವೈ.ಎಸ್.ಪಿ, ಕೆಜಿಎಫ್ ರವರ ಮಾರ್ಗದರ್ಶನದಲ್ಲಿ ಶ್ರೀ. ಆರ್.ವೆಂಕಟೇಶ, ಸಿಪಿಐ, ಬೇತಮಂಗಲ ವೃತ್ತ, ಕೆ.ಜಿ.ಎಫ್ ರವರಿಗೆ ಭಾತ್ಮಿದಾರರಿಂದ ದೊರೆತ ಖಚಿತ ಮಾಹಿತಿ ಮೇರೆಗೆ ಬೆಳಗಿನ ಜಾವ 5:00 ಗಂಟೆಗೆ ಸಿಬ್ಬಂದಿಯವರಾದ ಶ್ರೀ.ಲಕ್ಷ್ಮೀನಾರಾಯಣ ಎ.ಎಸ್.ಐ, ಶ್ರೀ.ಸುರೇಶ್ ಸಿ.ಹೆಚ್.ಸಿ, ಶ್ರಿ.ಸಿದ್ದರಾಮಪಾಟೀಲ್ ಸಿಪಿಸಿ, ಶ್ರೀ.ರಮೇಶ ಈ ಜಂಬಗಿ ಸಿಪಿಸಿ, ಶ್ರೀ.ಸುಧಾಕರ್ ಸಿ.ಪಿ.ಸಿ ಮತ್ತು ಶ್ರೀ ಕೇಶವಮೂರ್ತಿ ಎ.ಹೆಚ್.ಸಿ […]
ಕೆ .ಜಿ. ಎಫ್. ಜಿಲ್ಲಾ ಪೊಲೀಸ್ ವತಿಯಿಂದ ವಿಶ್ವ ಯೋಗ ದಿನಾಚರಣೆ ಆಚರಿಸಲಾಯಿತು
ದಿನಾಂಕ 21.06.2022 ರಂದು ಬೆಳಿಗ್ಗೆ ಕೆ.ಜಿ.ಎಫ್ ಪೊಲೀಸ್ ಜಿಲ್ಲೆ ವತಿಯಿಂದ ಡಿ.ಎ.ಆರ್ ಪೊಲೀಸ್ ಮೈದಾನದಲ್ಲಿ “Yoga for Humanity” “ಮಾನವೀಯತೆಗಾಗಿ ಯೋಗ” ಎಂಬ ಘೋಷವಾಕ್ಯದಡಿಯಲ್ಲಿ ಈ ವರ್ಷ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಪೊಲೀಸ್ ಅಧೀಕ್ಷಕರಾದ ಡಾ|| ಕೆ. ಧರಣೀದೇವಿ, ಐ.ಪಿ.ಎಸ್, ಪೊಲೀಸ್ ಉಪಾಧೀಕ್ಷಕರಾದ ಶ್ರೀ. ಪಿ. ಮುರಳಿಧರ, ಯೋಗ ತರಬೇತುದಾರರಾದ ಶ್ರೀ. ಪ್ರವೀಣ್ ಸಿಂಗ್ ರಾಣ, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ಭಾಗವಾಹಿಸಿದರು.
ಕಳವು ಪ್ರಕರಣದ ಆರೋಪಿ ಬಂಧನ 38 ಗ್ರಾಂ ಬಂಗಾರ ವಶ
ರಾಬರ್ಟಸನ್ಪೇಟೆ ಪೊಲೀಸ್ ಠಾಣೆಯ ಮೊ.ಸಂ. 21/2022 ಕಲಂ 454,380 ಐ.ಪಿ.ಸಿ ಹಾಗೂ ಮೊ.ಸಂ 60/2021 ಕಲಂ 454, 4547, 380 ಐ.ಪಿ.ಸಿ ಪ್ರಕರಣಗಳಲ್ಲಿ ಕಳುವಾಗಿರುವ ಮಾಲು & ಆರೋಪಿಗಳ ಪತ್ತೆ ಸಲುವಾಗಿ ಪೊಲೀಸ್ ಅಧೀಕ್ಷಕರಾದ ಡಾ|| ಧರಣೀದೇವಿ, ಐಪಿಎಸ್ ಮತ್ತು ಪೊಲಿಸ್ ಉಪಾಧೀಕ್ಷಕರಾದ ಪಿ. ಮುರಳೀಧರ ರವರ ಮಾರ್ಗದರ್ಶನದಂತೆ ರಾಬರ್ಟ್ಸನ್ಪೇಟೆ ವೃತ್ತ ನಿರೀಕ್ಷಕರಾದ ಕುಮಾರಸ್ವಾಮಿ.ಟಿ.ಆರ್ ರವರ ನೇತೃತ್ವದಲ್ಲಿ ಪಿ.ಎಸ್.ಐ ಶ್ರೀಮತಿ. ಶೃತಿ, ಪ್ರೋ.ಪಿ.ಎಸ್.ಐ ಶ್ರೀನಿವಾಸ್ ಪ್ರಸಾದ್. ಎಸ್.ಜಿ ಹಾಗೂ ಸಿಬ್ಬಂದಿಯವರನ್ನು […]
ಕೆಜಿಎಫ್-ನೂತನ ಎಸ್ಪಿ ಡಾ|| ಕೆ. ಧರಣಿ ದೇವಿ ಅಧಿಕಾರ ಸ್ವೀಕಾರ
ಕೆಜಿಎಫ್ ಪೊಲೀಸ್ ಜಿಲ್ಲೆಯ ನೂತನ ರಕ್ಷಣಾಧಿಕಾರಿಗಳಾಗಿ ಡಾ|| ಕೆ.ಧರಣಿ ದೇವಿ ಅವರು ಶನಿವಾರದಂದು ಬೆಳಿಗ್ಗೆ ಅಧಿಕಾರ ವಹಿಸಿಕೊಂಡರು. ಇಲ್ಲಿಯವರೆಗೆ ಕೆಜಿಎಫ್ ಎಸ್ಪಿ ಪ್ರಭಾರದಲ್ಲಿದ್ದ ಕೋಲಾರ ಜಿಲ್ಲಾ ರಕ್ಷಣಾಧಿಕಾರಿ ಡಿ.ದೇವರಾಜ್ ಅವರಿಂದ ಪ್ರಭಾರವನ್ನು ವಹಿಸಿಕೊಂಡರು. ಎಸ್ಪಿ ಡಾ|| ಕೆ.ಧರಣಿ ದೇವಿ ಅವರು ಈ ಹಿಂದೆ ಮೈಸೂರು ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾಗಿದ್ದರು. ಪ್ರಸ್ತುತ ಕೆಜಿಎಫ್ ಪೊಲೀಸ್ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಪ್ರಭಾರ ವಹಿಸಿಕೊಂಡ ನಂತರ ಅಧಿಕಾರಿಗಳೊಂದಿಗೆ ಮಾತನಾಡಿದ ಎಸ್ಪಿ ಡಾ|| ಕೆ.ಧರಣಿ […]
ಕೆಜಿಎಫ್ : ಪೊಲೀಸ್ ಪೇದೆಯ ಮೇಲೆ ಕೊಲೆಯತ್ನ ನಡೆಸಿದ ಆರೋಪಿಗಳ ಬಂಧನ
ಕರ್ತವ್ಯ ನಿರತ ಪೊಲೀಸ್ ಪೇದೆಯ ಮೇಲೆ ಕಲ್ಲಿನಿಂದ ಮಾರಣಾಂತಿಕ ಹಲ್ಲೆಗೈದು ಕೊಲೆಯತ್ನ ನಡೆಸಿದ ಇಬ್ಬರು ಆರೋಪಿಗಳನ್ನು ಒಂದೇ ದಿನದಲ್ಲಿ ಪೊಲೀಸರು ಬಂಧಿಸಿದ್ದಾರೆ. ಕೆಜಿಎಫ್ ಪೊಲೀಸ್ ಜಿಲ್ಲೆಯ ಆಂಡ್ರಸನ್ಪೇಟೆ ಪೊಲೀಸ್ ಠಾಣೆಯ ಕರ್ತವ್ಯ ನಿರತ ಪೊಲೀಸ್ ಕಾನ್ಸ್ಟೇಬಲ್ ಅಶೋಕ್ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳು ಪಿ.ರಾಜೇಶ್ ಮತ್ತು ಕೆ.ಸಚಿನ್ಸುಧಾಕರ್ ಅವರುಗಳನ್ನು ಕೃತ ವೆಸಗಿದ ೨೪ ಗಂಟೆಗಳಲ್ಲಿಯೇ ಬಂಧಿಸುವಲ್ಲಿ ಸ್ಥಳೀಯ ವಿಶೇಷ ಅಪರಾಧ ಪತ್ತೆ ದಳದ ಪೊಲೀಸರು ಯಶಸ್ವಿಯಾಗಿದ್ದಾರೆ. ಮೇ. […]
ಧಾರ್ಮಿಕ ಕೇಂದ್ರಗಳಲ್ಲಿ ಸಾರ್ವಜನಿಕ ಪ್ರವೇಶ ನಿಷೇಧ : ಕೆ .ಜಿ .ಎಫ್. ಪೊಲೀಸ್
ಎಲ್ಲೆಲ್ಲೂ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಕೋವಿಡ್ ನಿಯಮಾವಳಿಗಳನ್ವಯ ಎಲ್ಲಾ ಧರ್ಮಗಳ ಧಾರ್ಮಿಕ ಕೇಂದ್ರಗಳಲ್ಲಿ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲು ಸಹಕರಿಸಬೇಕೆಂದು ಧಾರ್ಮಿಕ ಕಾರ್ಯಗಳನ್ನು ಸರ್ಕಾರದ ಆದೇಶದಂತೆ ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸುವಂತೆ ಕರೆ ನೀಡಿಲಾಗಿದೆ. ದಿನಾಂಕ 22.04.2021 ಗುರುವಾರದಂದು ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಎಲ್ಲಾ ಧರ್ಮಗಳ ಮುಖಂಡರುಗಳ ಶಾಂತಿ ಸಮಿತಿಯ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಇದುವರೆವಿಗೂ ಯಾವುದೇ ರೀತಿಯ ಅಹಿತಕರ […]