ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ವ್ಯಾಪ್ತಿಯಲ್ಲಿ ಮುಂಬರುವ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾನ್ಯ ಪೊಲೀಸ್ ಅಧೀಕ್ಷಕರಾದ ಡಾ || ವಿಕ್ರಮ್ ಅಮಟೆ ಐ.ಪಿ.ಎಸ್ ರವರು ದಿನಾಂಕ 19.03.2023 ರಂದು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳ ಬ್ರಿಫಿಂಗ್ ಸಭೆ ನಡೆಸಿ, ಸಿಬ್ಬಂದಿಗಳ ಕುಂದುಕೊರತೆಗಳನ್ನು ವಿಚಾರಿಸಿ, ಮುಂಬರುವ ಚುನಾವಣೆಗೆ ಸಂಬಂದಿಸಿದ ಕಾನೂನುಗಳ ಬಗ್ಗೆ ಮಾಹಿತಿ ನೀಡಿ, ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುವ ಬಗ್ಗೆ ಮಾರ್ಗದರ್ಶನ ನೀಡಿರುತ್ತಾರೆ. ಸದರಿ […]
9448190523
ಲಾಭಕ್ಕಾಗಿ ಒಂಟಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗಳ ಬಂಧನ
ದಿನಾಂಕ 15.07.2022 ರಂದು ರಾತ್ರಿ ಸುಮಾರು 7.15 ಗಂಟೆಗೆ ಆಂಡ್ರಸನ್ಪೇಟೆ ಪೊಲೀಸ್ ಠಾಣಾ ಸರಹದ್ದು ಪಚ್ಚಪ್ಪ ಸ್ಟ್ರೀಟ್ನಲ್ಲಿ ಅಪರಿಚಿತ ವ್ಯಕ್ತಿಗಳು ಸುಲೋಚನ ಎಂಬ 52 ವರ್ಷ ವಯಸ್ಸಿನ ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಆಕೆಯ ಕತ್ತಿನಲ್ಲಿದ್ದ 1,20,000/- ರೂ ಬೆಲೆ ಬಾಳುವ ಸುಮಾರು 40 ಗ್ರಾಂ ತೂಕದ ಬಂಗಾರದ ಮಾಂಗಲ್ಯದ ಸರವನ್ನು ಒಂದು ಮೊಬೈಲ್ ಪೋನ್ 15../- ನಗದು ಹಣವನ್ನು ದೋಚಿಕೊಂಡು ಹೋಗಿದ್ದು ಆಕೆಯ ಗಂಡ ಶ್ರೀ.ಶೇಗರ್ ಬಿನ್ ಲೇಟ್ […]
ತಿಲಕ್ ನಗರ್ ಪೊಲೀಸ್ ಠಾಣೆಯ ನೂತನ ಠಾಣಾಧಿಕಾರಿ ಅಧಿಕಾರ ಸ್ವೀಕಾರ
ಬೆಂಗಳೂರು ನಗರ ತಿಲಕ್ ನಗರ್ ಪೊಲೀಸ್ ಠಾಣೆಯ ನೂತನ ಠಾಣಾಧಿಕಾರಿಯಾಗಿ ಶ್ರೀ .ಶಂಕರಾಚಾರ್ .ಬಿ ಅಧಿಕಾರ ಸ್ವೀಕಾರ ಮಾಡಿದರು .ಈ ಹಿಂದೆ ಅವರು ಬೆಂಗಳೂರಿನ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಭಾರಿಯಾಗಿದ್ದರು.ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ತನ್ನ ಅಧಿಕಾರಾವಧಿಯಲ್ಲಿ ಸಹಕಾರ ನೀಡಿದ ಪ್ರತಿ ಸಂಸ್ಥೆಗೆ ಅವರು ಧನ್ಯವಾದ ಅರ್ಪಿಸಿದರು ಮತ್ತು ಇಲ್ಲಿಯೂ ಸಹ ಅದೇ ರೀತಿ ಸಹಕಾರ ನೀಡಬೇಕೆಂದು ವಿನಂತಿಸಿದರು.ಶ್ರೀ ಶಂಕರಾಚಾರ್ . ಬಿ ಅವರ ಹಿಂದಿನ ಅಧಿಕಾರಾವಧಿಯಲ್ಲಿ ವಿಲ್ಸನ್ […]
ಮಹಿಳಾ ಟ್ರಾಫಿಕ್ ಪೇದೆಗೆ ಮೆಚ್ಚುಗೆ ಗಳಿಸಿದ ಸಾರ್ವಜನಿಕರು
ಬೆಂಗಳೂರು : ಶ್ರೀಮತಿ. ಟಿ.ಬಿ ಪದ್ಮಾವತಿ ಎಸ್ .ಐ ಟ್ರಾಫಿಕ್ ಮಡಿವಾಳ ಠಾಣಾ ಅವರು ಇಷ್ಟಪಟ್ಟು ಆಯ್ಕೆ ಮಾಡಿಕೊಂಡ ವೃತ್ತಿಯಾಗಿತ್ತು .ಶ್ರೀಮತಿ ಟಿಬಿ ಪದ್ಮಾವತಿ ಅವರಿಗೆ ಪೊಲೀಸ್ ಇಲಾಖೆಯಲ್ಲಿ 28ವರುಷ ಸೇವೆಯಾಗಿತ್ತು .ಅದರಲ್ಲಿ 14ವರುಷ ಕ್ರೀಡೆಯಲ್ಲಿ ಸೇವೆ ಸಲ್ಲಿಸಿದರು ಅನಂತರ 14ವರುಷ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ .ಇವರ ಸೇವೆ ಯಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ ಅದರಲ್ಲೂ ಮುಖ್ಯವಾಗಿ ಮುಖ್ಯಮಂತ್ರಿ ಪದಕ ,ಏಕಲವ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ .ಇದರಲ್ಲಿ ವಿಶೇಷ ಏನೆಂದರೆ […]
ಕಾರವಾರ ಪೊಲೀಸರು ಯಶಸ್ವಿ ಕಾರ್ಯಾಚರಣೆ ಗಾಂಜಾ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ
ದಿನಾಂಕ: 23-04-2022 ರಂದು 15-30 ಗಂಟೆಗೆ ಕಾರವಾರ ಶಹರ ಪೊಲೀಸ್ ಠಾಣಾ ಪಿ.ಎಸ್.ಐ.ಸಂತೋಷಕುಮಾರ ಎಮ್, ರವರಿಗೆ ಕಾರವಾರ ಅಜ್ಜಿ ಹೊಟೇಲ್ ಹಿಂಬದಿಗೆ ಇಬ್ಬರು ವ್ಯಕ್ತಿಗಳು ಅಕ್ರಮವಾಗಿ ಗಾಂಜಾ ಮಾದಕ ವಸ್ತುವನ್ನು ಸಾಗಾಟ ಮಾಡಿಕೊಂಡು ಬಂದು ಮಾರಾಟ ಮಾಡುವ ತಯಾರಿಯಲ್ಲಿರುತ್ತಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಸುಮನ್ ಪೆನ್ನೇಕರ ಐ.ಪಿ.ಎಸ್, ರವರ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಎಸ್. ಬದರಿನಾಥ ರವರ ಮತ್ತು ಪೊಲೀಸ್ […]
ಅಂತರರಾಜ್ಯ ಕಳ್ಳರ ಬಂಧನ ಲಕ್ಷಾಂತರ ಮೌಲ್ಯದ ಸ್ವತ್ತುಗಳು ವಶಕ್ಕೆ
ದಿನಾಂಶ:05-04-2022 ರಂದು ಫಿರ್ಯಾದಿ ಶ್ರೀ ನಾಗರಾಜ ಸುರೇಶ ಗಾಂವಕರ ಇವರು ಠಾಣೆಗೆ ಬಂದು ಚೆಂಡಿಯಾದಲ್ಲಿ ತಾವು ಅರ್ಚಕರಾಗಿರುವ ಶ್ರೀ ನವ ಚಂಡಿಕಾ ದೇವಿ ದೇವಸ್ಥಾನದ ಪಕ್ಕದ ಬಾಗಿಲನ್ನು ಒಡೆದು ದೇವಸ್ಥಾನದ ಒಳಗೆ ಪ್ರವೇಶಿಸಿ ಒಳಗಡೆಯಿದ್ದ ದೇವಿಯ ಬೆಳ್ಳಿ, ಬಂಗಾರದ ಆಭರಣಗಳು, ಮತ್ತು ನಗದು ಹಣ, ಒಟ್ಟು ಸೇರಿ, ಸುಮಾರು 3,77,000/- ಮೌಲ್ಯದ ಸ್ವತ್ತು ಹಾಗೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಅಂತಾ ನೀಡಿದ ದೂರನ್ನು ಕಾರವಾರ ಗ್ರಾಮೀಣ ಪೊಲೀಸ್ […]
ಮಡಿವಾಳ ಠಾಣೆಯಲ್ಲಿ ಮಾಕ್ಷಿಕ ಜನಸಂಪರ್ಕ ಸಭೆ ನಡೆಸಲಾಯಿತು
ಮಾಸಿಕ ಜನಸಂಪರ್ಕ ದಿನದ ಅಂಗವಾಗಿ ಫೆಬ್ರವರಿ26 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆಸಾರ್ವಜನಿಕರು ಸಮಸ್ಯೆ,ಸಲಹೆಗಳನ್ನು ಚರ್ಚೆ ಮಾಡಲು ಸಾರ್ವಜನಿಕರು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿದರು .ಎಲ್ಲ ಪೊಲೀಸ್ ಠಾಣೆಗಳಲ್ಲಿ ಜನಸಂಪರ್ಕ ಸಭೆ ನಡೆಸಲಾಯಿತು .ಬೆಂಗಳೂರಿನ ಮಡಿವಾಳ ಪೂಲೀಸ್ ಠಾಣೆ ವತಿಯಿಂದ ಶನಿವಾರ ಜನಸಂಪರ್ಕ ಸಭೆಯನ್ನು ಪೋಲಿಸ್ ಠಾಣೆಯಲ್ಲಿ ನಡೆಸಲಾಯಿತು.ಮಡಿವಾಳದಲ್ಲಿರುವ ಸಾರ್ವಜನಿಕರು ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರುಗಳನ್ನು ಡಿ.ಸಿ.ಪಿ ಯವರಿಗೆ ದಾಖಲಿಸಿದರು ,ಹೆಚ್ಚಾಗಿ ಟ್ರಾಫಿಕ್ ಸಮಸ್ಯೆ ಬಗ್ಗೆ ದೂರುಗಳನ್ನು ಸಾರ್ವಜನಿಕರು ದಾಖಲಿಸಿದರು. […]
ಕರ್ನಾಟಕ ಗೋವಾ ಗಡಿಭಾಗ ಪೊಲೀಸರಿಂದ ಗೋವಾ ರಾಜ್ಯದಿಂದ ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರಿಗೆ ವಿಶೇಷ ಸೂಚನೆಗಳು
ಗೋವಾ ರಾಜ್ಯದಲ್ಲಿ , ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಗೋವಾದಿಂದ ಕರ್ನಾಟಕಕಕ್ಕೆ ಆಗಮಿಸುವ ಪ್ರಯಾಣಿಕರಿಗೆ ಸಂಬಂಧಪಟ್ಟಂತೆ ಈ ಕೆಳಕಂಡ ವಿಶೇಷ ಸರ್ವೇಕ್ಷಣಾ ಚಟುವಟಿಕೆಗಳನ್ನು ಕಡ್ಡಾಯವಾಗಿ ಕೈಗೊಳ್ಳಲು ಸೂಚಿಸಿದೆ. 1.ವಿಮಾನ, ರೈಲು, ರಸ್ತೆ (ಬಸ್ ಹಾಗೂ ಇತರ ಸ್ವಂತ ವಾಹನಗಳ ಮುಖಾಂತರ) ಮಾರ್ಗದಲ್ಲಿ ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರು 72 ಗಂಟೆಗಳ ಒಳಗೆ ಮಾಡಿಸಿದ, ಆರ್ಟಿಪಿಸಿಆರ್ ನೆಗೆಟಿವ್ ಟೆಸ್ಟ್ ವರದಿಯನ್ನು ಹೊಂದುವುದು ಕಡ್ಡಾಯವಾಗಿರುತ್ತದೆ. ಗೋವಾದಿಂದ connecting flightನಲ್ಲ ಪ್ರಯಾಣಿಸುವವರಿಗೂ ಈ ನಿಯಮವು ಅನ್ವಯಿಸುತ್ತದೆ. […]
ಮೈಸೂರು ಜಿಲ್ಲಾ ಪೊಲೀಸರಿಂದ ‘ತೆರೆದ ಮನೆ’ ಕಾರ್ಯಕ್ರಮ
ಜಿಲ್ಲಾ ಪೊಲೀಸ್ ಅಧೀಕ್ಷಕರಾದರಾದ ಶ್ರೀ.ಚೇತನ್.ಆರ್.ಐಪಿಎಸ್ ರವರ ಮಾರ್ಗದರ್ಶನದಂತೆ ದಿನಾಂಕ 14-09-2021 ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಸೈಂಟ್ ಅರ್ನಾಲ್ಡ್ ಶಾಲೆಯ ವಿದ್ಯಾರ್ಥಿಗಳಿಗಾಗಿ “ತೆರೆದ ಮನೆ “ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು . ಡಿವೈಎಸ್ಪಿ ಮೈಸೂರು ಗ್ರಾಮಾಂತರ ಶ್ರೀ. ಸುಮಿತ್ ರವರು ವಿದ್ಯಾರ್ಥಿಗಳಿಗೆ ಸೈಬರ್ ಅಪರಾಧ, ಮಾದಕ ವಸ್ತುಗಳ ಬಳಕೆ ಮಾಡದಿರುವ ಬಗ್ಗೆ, ಬಾಲ್ಯ ವಿವಾಹ ತಡೆ, ಬ್ಯಾಂಕ್ ವಂಚನೆಗಳ ಬಗ್ಗೆ ಅರಿವು ಮೂಡಿಸಿ ತುರ್ತು ಸಮಯದಲ್ಲಿ ನಮ್ಮ112 ಸಹಾಯವಾಣಿಯನ್ನು ಬಳಸಿಕೊಳ್ಳುವಂತೆ […]