ರಾಮನಗರ ಪೊಲೀಸ್ ಠಾಣೆ ಯವರ ಕಾರ್ಯಾಚರಣೆ

0 0
Read Time:2 Minute, 54 Second

ಉತ್ತರಕನ್ನಡ ಜಿಲ್ಲೆಯ ರಾಮನಗರ ಪೊಲೀಸ್ ಠಾಣೆಯ ಕ್ಯಾಸರಲಾಕ್ದ ರೈಲ್ವೆ ಸ್ಟೇಷನ ಹತ್ತಿರ ನಡೆದ ಕೋರ್ ಕೇಬಲ್ ಕಳ್ಳತನ ಪ್ರಕರಣದಲ್ಲಿ ಆರೋಪಿತರ ಮತ್ತು ಕಳ್ಳತನ ಆಗಿರುವ ಕೇಬಲ್ಗ ಳನ್ನು ಪತ್ತೆಗಾಗಿ ಮಾನ್ಯ ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಶ್ರೀ ಶಿವಪ್ರಕಾಶ ದೇವರಾಜು ಐ.ಪಿ.ಎಸ್, ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉತ್ತರಕನ್ನಡ ಶ್ರೀ ಬದ್ರಿನಾಥ ಎಸ್, ಮಾನ್ಯ ಪೊಲೀಸ್ ಉಪಾಧೀಕ್ಷಕರು ದಾಂಡೇಲಿ ಉಪ ವಿಭಾಗ ಶ್ರೀ ಕೆ.ಎಲ್ ಗಣೇಶ ರವರ ಮಾರ್ಗದರ್ಶನದಲ್ಲಿ ಸಿ.ಪಿ.ಐ ದಾಂಡೇಲಿ ಪ್ರಭಾರ ಜೋಯಿಡಾ ಶ್ರೀ ಪ್ರಭು ಆರ್ ಗಂಗೆನಹಳ್ಳಿ ಮುಂದಾಳತ್ವದಲ್ಲಿ, ರಾಮನಗರ ಪೊಲೀಸ್ ಠಾಣೆಯ ಪಿ.ಎಸ್.ಐ(ಕಾ&ಸು)ಕಿರಣಕುಮಾರ ಪಾಟೀಲ್, ಪಿ.ಎಸ್.ಐ(ಅಪರಾಧ) ಎಲ್.ಎಲ್ ಪೂಜಾರಿ, ಪೊಲೀಸ್ ಸಿಬ್ಬಂದಿಗಳ ತಂಡವು ರಾಮನಗರ ಪೊಲೀಸ್ ಠಾಣಾ ಗುನ್ನಾ ನಂ : 44/2021 ಕಲಂ : 379 ಐಪಿಸಿ ಪ್ರಕರಣದಲ್ಲಿ ಈ ಕೆಳಗಿನ ಆಪಾದಿತರಾದ

1) ಯಲ್ಲಪ್ಪ ತಂದೆ ಬಸವಣ್ಣಿ ಕುಪ್ಪನ್ನವರ ಪ್ರಾಯ-38 ವರ್ಷ, ರೈಲ್ವೆ ಉದ್ಯೋಗಿ, ಸಾ|| ದಾಸನಟ್ಟಿ ತಾ|| ಗೋಕಾಕ ಜಿ|| ಬೆಳಗಾವಿ ಹಾಲಿ ಮನೆ ನಂ : 26/ಎ, ರೈಲ್ವೆ ಕ್ವಾಟ್ರಸ್, ಕ್ಯಾಸಲರಾಕ್ ತಾ|| ಜೋಯಿಡಾ

2) ಅಜಯ ತಂದೆ ಬಬನ ಕಂಜರಬಾಟ ಪ್ರಾಯ-30 ವರ್ಷ ಕೂಲಿಕೆಲಸ ಸಾ|| ಗಾಂಧಿನಗರ, ದಾಂಡೇಲಿ

3) ಸೋನು ತಂದೆ ಅನೀಲ ಕಂಜರಬಾಟ ಪ್ರಾಯ-25 ವರ್ಷ ಕೂಲಿಕೆಲಸ ಸಾ|| ಗಾಂಧಿನಗರ, ದಾಂಡೇಲಿ

4) ಜಿತೇಂದ್ರ ತಂದೆ ರಮೇಶ ಮಾಸ್ರಿ ಪ್ರಾಯ-38 ವರ್ಷ ಕೂಲಿಕೆಲಸ ಸಾ|| ಗಾಂಧಿನಗರ, ದಾಂಡೇಲಿ

5) ದೀಪಕ ತಂದೆ ಸೂರಜ ಕಂಜರಬಾಟ ಪ್ರಾಯ-32 ವರ್ಷ ಕೂಲಿಕೆಲಸ ಸಾ|| ಗಾಂಧಿನಗರ, ದಾಂಡೇಲಿ

6) ಜಿಗನು ತಂದೆ ಮುನ್ಸಿ ಕಂಜರಬಾಟ ಪ್ರಾಯ-45 ವರ್ಷ ಕೂಲಿಕೆಲಸ ಸಾ|| ಗಾಂಧಿನಗರ, ದಾಂಡೇಲಿ ಇವರು ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ಕೇಬಲನ್ನು ಕಳ್ಳತನ ಮಾಡಿದವರನ್ನು ದಸ್ತಗಿರಿ ಮಾಡಿ, ಅಪಾದಿತರಿಂದ ಸುಟ್ಟು ತೆಗೆದ ಒಟ್ಟು 470 ಕೆ.ಜಿ ತಾಮ್ರದ ತಂತಿಯನ್ನು ವಶಪಡಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ರಾಮನಗರ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳ ಈ ಪತ್ತೆ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಉ.ಕ. ಜಿಲ್ಲೆ ಕಾರವಾರ ಹಾಗೂ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉ.ಕ. ಜಿಲ್ಲೆ ಕಾರವಾರ ರವರು ಶ್ಲಾಘಿಸಿರುತ್ತಾರೆ.

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

This image has an empty alt attribute; its file name is John_prem.jpg

ಜೆ .ಜಾನ್ ಪ್ರೇಮ್

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಮೈಸೂರು ಜಿಲ್ಲೆಯ ನೂತನ ಪೊಲೀಸ್ ಅಧೀಕ್ಷಕರಾಗಿ ಶ್ರೀ.ಚೇತನ್. ಆರ್. ಐಪಿಎಸ್ ರವರು ನಿರ್ಗಮಿತ ಎಸ್ಪಿ ಶ್ರೀ.ಸಿ.ಬಿ.ರಿಷ್ಯಂತ್, ಐಪಿಎಸ್ ರವರಿಂದ ಅಧಿಕಾರ ವಹಿಸಿಕೊಂಡರು

ಮೈಸೂರಿನ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಐಪಿಎಸ್ ಅಧಿಕಾರಿ ಆರ್.ಚೇತನ್ ಗುರುವಾರ ಅಧಿಕಾರ ಸ್ವೀಕರಿಸಿದರು. ಮೈಸೂರು ಜಿಲ್ಲಾ ಎಸ್ಪಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ನಿರ್ಗಮಿತ ಜಿಲ್ಲಾ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಅವರಿಂದ ಅಧಿಕಾರ ಸ್ವೀಕಾರ ಮಾಡಿಕೊಂಡರು. ನಂತರ ಮಾತನಾಡಿದ ಆರ್.ಚೇತನ್, “”ನಾನು ಕರ್ನಾಟಕದವನೇ ಆಗಿರುವುದರಿಂದ ನನಗೆ ಮೈಸೂರಿನ ಬಗ್ಗೆ ಗೊತ್ತಿದೆ. ಮೈಸೂರಿನ ಜನರು ಸೌಮ್ಯ ಸ್ವಭಾವದವರು. ಜನರ ಅಹವಾಲುಗಳನ್ನು ಆಲಿಸಿ ಸಮಸ್ಯೆಗಳಿಗೆ ತ್ವರಿತವಾಗಿ, ಸಾಂವಿಧಾನಿಕವಾಗಿ ಸ್ಪಂದಿಸಲು ಅಧಿಕಾರಿಗಳಿಗೆ ಸೂಚನೆ […]

Get News on Whatsapp

by send "Subscribe" to 7200024452
Close Bitnami banner
Bitnami