ಕೆಜಿಎಫ್ : ಪೊಲೀಸ್ ಪೇದೆಯ ಮೇಲೆ ಕೊಲೆಯತ್ನ ನಡೆಸಿದ ಆರೋಪಿಗಳ ಬಂಧನ

0 0
Read Time:2 Minute, 39 Second

ಕರ್ತವ್ಯ ನಿರತ ಪೊಲೀಸ್ ಪೇದೆಯ ಮೇಲೆ ಕಲ್ಲಿನಿಂದ ಮಾರಣಾಂತಿಕ ಹಲ್ಲೆಗೈದು ಕೊಲೆಯತ್ನ ನಡೆಸಿದ ಇಬ್ಬರು ಆರೋಪಿಗಳನ್ನು ಒಂದೇ ದಿನದಲ್ಲಿ ಪೊಲೀಸರು ಬಂಧಿಸಿದ್ದಾರೆ. ಕೆಜಿಎಫ್ ಪೊಲೀಸ್ ಜಿಲ್ಲೆಯ ಆಂಡ್ರಸನ್ಪೇಟೆ ಪೊಲೀಸ್ ಠಾಣೆಯ ಕರ್ತವ್ಯ ನಿರತ ಪೊಲೀಸ್ ಕಾನ್ಸ್ಟೇಬಲ್ ಅಶೋಕ್ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳು ಪಿ.ರಾಜೇಶ್ ಮತ್ತು ಕೆ.ಸಚಿನ್ಸುಧಾಕರ್ ಅವರುಗಳನ್ನು ಕೃತ ವೆಸಗಿದ ೨೪ ಗಂಟೆಗಳಲ್ಲಿಯೇ ಬಂಧಿಸುವಲ್ಲಿ ಸ್ಥಳೀಯ ವಿಶೇಷ ಅಪರಾಧ ಪತ್ತೆ ದಳದ ಪೊಲೀಸರು ಯಶಸ್ವಿಯಾಗಿದ್ದಾರೆ. ಮೇ. ೮ ರಂದು ಆಂಡ್ರಸನ್ಪೇಟೆಯ ಚಾಮರಾಜಪೇಟೆಯ ವೃತ್ತದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಅಶೋಕ್ ಕರ್ತವ್ಯದಲ್ಲಿದ್ದು, ಲಾಕ್ಡೌನ್ ಹಿನ್ನೆಲೆಯಲ್ಲಿ ಅನಾವಶ್ಯಕವಾಗಿ ದ್ವಿಚಕ್ರ ವಾಹನಗಳಲ್ಲಿ ತಿರುಗಾಡುತ್ತಿದ್ದವರನ್ನು ತಡೆದು ವಿಚಾರಣೆ ಮಾಡುತ್ತಿದ್ದರು. ಆ ಸಮಯದಲ್ಲಿ ಒಬ್ಬ ದ್ವಿಚಕ್ರ ವಾಹನದ ಸವಾರನ ಜೊತೆ ಮಾತಿನ ಚಕಮತಿ ನಡೆದು ನಂತರ ಹೊರಟು ಹೋಗಿದ್ದು, ಆನಂತರ ಮದ್ಯಾಹ್ನ ಸುಮಾರು ೧೨.೪೦ ಗಂಟೆಗೆ ಪಿಸಿ ಅಶೋಕ್ ಚಾಮರಾಜಪೇಟೆ ವೃತ್ತದಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದಾಗ ಆರೋಪಿಗಳು ಆಂಡ್ರಸನ್ಪೇಟೆ ಕಡೆಯಿಂದ ಪಲ್ಸರ್ ದ್ವಿಚಕ್ರ ವಾಹನದಲ್ಲಿ ಬಂದು ಏಕಾಏಕೀ ಒಂದು ಕಲ್ಲಿನಿಂದ ಪಿಸಿ ಅಶೋಕ್ ತಲೆಗೆ ಹೊಡೆದ ಪರಿಣಾಮ ಅಶೋಕ್ಗೆ ರಕ್ತಗಾಯವಾಗಿದ್ದು, ಆರೋಪಿಗಳು ವೇಗವಾಗಿ ದ್ವಿಚಕ್ರವಾಹನದಲ್ಲಿ ಪರಾರಿಯಾಗಿರುತ್ತಾರೆ. ಈ ಸಂಬಂಧ ಆಂಡ್ರಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸ್ ಅಧೀಕ್ಷಕರು, ಇವರ ಮಾರ್ಗದರ್ಶನದಲ್ಲಿ ವಿಶೇಷ ಅಪರಾಧ ತಂಡವನ್ನು ರಚಿಸಿದ್ದು, ಪೊಲೀಸರು ಆರೋಪಿಗಳಾದ ಎಫ್.ಬ್ಲಾಕ್ನ ನಿವಾಸಿ ರಾಜೇಶ್ (೩೮), ಮಾರಿಕುಪ್ಪಂ ಸಾಮಿಲ್ ಲೈನಿನ ನಿವಾಸಿ ಸಚಿನ್ಸುಧಾಕರ್ (೨೫) ರವರನ್ನು ಮೇ. ೯ ರ ಬೆಳಿಗ್ಗೆ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಪಲ್ಸರ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

This image has an empty alt attribute; its file name is John_prem.jpg

ಜೆ .ಜಾನ್ ಪ್ರೇಮ್

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಅಕ್ರಮ ಬೀಟಿಮರ ಪತ್ತೆ ಕೇರಳ ರಾಜ್ಯದ ಆರೋಪಿ ಬಂಧನ

ದಿನಾಂಕ 13-5-2021 ರಂದು ಬೆಳಗ್ಗೆ ವಿರಾಜಪೇಟೆ ಸಮೀಪದ ಕದನೂರು ಬಳಿ ಕೇರಳ ನೋಂದಣಿ ಸಂಖ್ಯೆಯ ಪಿಕಪ್ ವಾಹನ ಕೆಎಲ್-17 ಹೆಚ್ 3567ರಲ್ಲಿ ಕೇರಳ ರಾಜ್ಯದ ವ್ಯಕ್ತಿಯೋರ್ವ ಅಕ್ರಮವಾಗಿ ಬೀಟಿ ಮರದ ತುಂಡುಗಳನ್ನು ಕೇರಳ ರಾಜ್ಯಕ್ಕೆ ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ವರ್ತಮಾನದ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ದಾಳಿ ಮಾಡಿ ಆರೋಪಿ ಪಿ.ಪಿ. ಅನಾಸ್, 36 ವರ್ಷ, ತಂದೆ ಹಸೈನಾರ್, ವಾಸ- ಪಾಲಕ್ ಪರಂಬು ಹೌಸ್, ಮಲಪರಂಬು ಜಿಲ್ಲೆ, […]

Get News on Whatsapp

by send "Subscribe" to 7200024452
Close Bitnami banner
Bitnami