ಕಲಬುರಗಿ ನಗರ ಎಂಬಿ ನಗರ ಪೊಲೀಸ್ ಠಾಣೆ ವತಿಯಿಂದ ಯಶಸ್ವಿ ಕಾರ್ಯಾಚರಣೆ

0 0
Read Time:2 Minute, 38 Second

ಕಲಬುರಗಿ ನಗರದ ಎಂ.ಬಿ. ನಗರ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಆಯುಧ ಮಾರುತ್ತಿದ್ದ 5 ಜನ ಆರೋಪಿಗಳನ್ನು ಬಂಧಿಸಿ, ಬಂಧಿತರಿಂದ 2 ನಾಡ ಪಿಸ್ತೊಲಗಳು, 2 ಜೀವಂತ ಮದ್ದುಗುಂಡುಗಳು 5 ಮೋಬೈಲ ಸೇರಿದಂತೆ ಒಟ್ಟು 21,00,000 ಲಕ್ಷ ರೂಪಾಯಿ ಮೌಲ್ಯದ ಮುದ್ದೆ ಮಾಲು ಜಪ್ತಿ ಮಾಡಲಾಗಿರುತ್ತದೆ.

Kalaburagi City Police

ಕಲಬುರಗಿ ನಗರದ ಎಂ .ಬಿ .ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಸೌಭಾಗ್ಯ ಕಲ್ಯಾಣ ಮಂಟಪದ ಎದುರು ರಸ್ತೆ ಬದಿಯಲ್ಲಿ ಕಾರಿನಲ್ಲಿ ಅಕ್ರಮ ಆಯುಧ ಇಟ್ಟುಕೊಂಡು ಮಾರಾಟದಲ್ಲಿ ತೊಡಗಿರುತ್ತಾರೆ ಎಂದು ಖಚಿತವಾದ ಬಾತ್ಮಿ ಬಂದ ಮೇರೆಗೆ ಶ್ರೀ .ಎನ್. ಸತೀಶ್ ಕುಮಾರ್ ಐ.ಪಿ.ಎಸ್. ಪೊಲೀಸ್ ಆಯುಕ್ತರು ಕಲಬುರಗಿ ನಗರ .ಶ್ರೀ ಡಿ ಕಿಶೋರ್ ಬಾಬು ಐ.ಪಿ.ಎಸ್. ಉಪ ಪೊಲೀಸ್ ಆಯುಕ್ತರು ಕಲಬುರಗಿ ನಗರ .ಶ್ರೀ ಶ್ರೀಕಾಂತ ಕಟ್ಟಿಮನಿ ಕೆ .ಎಸ್. ಪಿ. ಎಸ್ . ( ಆ .ವಿ. & ಸಂಚಾರ ) ಉಪ ಪೊಲೀಸ್ ಆಯುಕ್ತರು ಕಲಬುರಗಿ ನಗರ .ಶ್ರೀ .ಅಂಶುಕುಮಾರ್ ಐ.ಪಿ.ಎಸ್. ಎ ಎಸ್ ಪಿ ಎ ಉಪ ವಿಭಾಗ ಕಲಬುರ್ಗಿ ನಗರ ರವರ ಮಾರ್ಗದರ್ಶನದಲ್ಲಿ ಶ್ರೀ. ಚಂದ್ರಶೇಖರ್ ತಿಗಡಿ ಪಿ .ಐ ಎಂ. ಬಿ ನಗರ ಪೊಲೀಸ್ ಠಾಣಾ ನೇತೃತ್ವದಲ್ಲಿ ಶ್ರೀ .ವಾಹೇದ ಕೊತ್ವಾಲ್ ಪಿ.ಎಸ್. ಐ . ರೌಡಿ ನಿಗ್ರಹ ದಳ ಮತ್ತು ಸಿಬ್ಬಂದಿಯವರಾದ ಶ್ರೀ. ಹುಸೇನ್ ಬಾಷಾ ಎ.ಎಸ್. ಐ ಸಿಪಿಸಿ ಶಿವಾನಂದ,ರಾಜ ಕುಮಾರ್ ,ತೌಸಿಫ್ ,ಇರಾನ್ ಇವರೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಆರೋಪಿಗಳನ್ನು ಹೈದ್ರಾಬಾದ್ ರಾಜ್ಯದಲ್ಲಿ ಹಿಡಿದು ಅವರಿಂದ ಅಕ್ರಮವಾಗಿ ಆಯುಧ ಹೊಂದಿದ್ದ 2ನಾಡ ಪಿಸ್ತೂಲ್ ಗಳು 2ಜೀವಂತ ಗುಂಡುಗಳು 5ಮೊಬೈಲುಗಳು 1ಇನೋವಾ ಹೀಗೆ ಒಟ್ಟು 21 ಲಕ್ಷ ರೂ ಮೌಲ್ಯ ಜಪ್ತಿ ಮಾಡಿಕೊಂಡಿದ್ದು ಇರುತ್ತಾರೆ .ಹೈದರಾಬಾದ್ ನಿವಾಸಿಗಳು ಆಯುಧಗಳು ಖರೀದಿ ಮಾಡಲು ಬಂದಿರುವುದಾಗಿ ತಿಳಿಸಿರುತ್ತಾರೆ .ಅಕ್ರಮ ನಾಡ ಪಿಸ್ತೂಲ್ ಹೊಂದಿದ್ದ ಆರೋಪಿತರಿಗೆ ಮಾರಾಟ ಮಾಡಲು ಬಂದ ಆರೋಪಿತರಿಗೆ ಪತ್ತೆ ಹಚ್ಚಿದ ಅಧಿಕಾರಿ ಮತ್ತು ಸಿಬ್ಬಂದಿ ಅವರಿಗೆ ಮೇಲಾಧಿಕಾರಿಯವರೂ ಮೆಚ್ಚಿಗೆ ವ್ಯಕ್ತ ಪಡಿಸಿರುತ್ತಾರೆ.

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

This image has an empty alt attribute; its file name is John_prem.jpg

ಜೆ .ಜಾನ್ ಪ್ರೇಮ್

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಕಲಬುರಗಿ ನಗರ ಪೊಲೀಸರಿಂದ ಕಾರ್ಯಾಚರಣೆ ಕೊಲೆ ಗ್ಯಾಂಗ್ ಬಂಧನ

ಕಲಬುರಗಿ ನಗರದ ಗ್ರಾಮೀಣ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣ ಭೇಧಿಸುವಲ್ಲಿ ಯಶಸ್ವಿಯಾದ ಗ್ರಾಮೀಣ ಪೊಲೀಸ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಮಾನ್ಯ ಪೊಲೀಸ ಆಯುಕ್ತರಾದ ಶ್ರೀ ಎನ್.ಸತೀಶಕುಮಾರ, ಐ.ಪಿ.ಎಸ್. ರವರು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ. ಆರೋಪಿ ತೀರಾ ದಸ್ತಗಿರಿ ಕುರಿತು ಮಾನ್ಯ ಎನ್. ಸತೀಶ್ ಕುಮಾರ್ ಐ.ಪಿ.ಎಸ್. ಪೊಲೀಸ್ ಆಯುಕ್ತರು ಕಲಬುರಗಿ ನಗರ ಮತ್ತು ಮಾನ್ಯ ಡಿ. ಕಿಶೋರ್ ಬಾಬು ಐ.ಪಿ.ಎಸ್. ಪೊಲೀಸ್ ಉಪ ಆಯುಕ್ತರು ಕಲಬುರಗಿ ನಗರ […]

Get News on Whatsapp

by send "Subscribe" to 7200024452
Close Bitnami banner
Bitnami