ಅಪರಿಚಿತ ಮೃತನ ವಾರಸುದಾರರ ಪತ್ತೆಗಾಗಿ ಪ್ರಕಟಣೆ

0 0
Read Time:2 Minute, 13 Second

ದಿನಾಂಕ:01.09,2023 ರಂದು ಬೆಳಗಿನ ಜಾವ ತುಮಕೂರು ರಸ್ತೆ ಕಡೆಯಿಂದ ಹೊಸೂರು ರಸ್ತೆ ಕಡೆಗೆ
ಹೋಗುತ್ತಿದ್ದ ಸುಮಾರು 35-40 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಗೆ ಅದೇ ರಸ್ತೆಯಲ್ಲಿ ಬಂದ ಅಪರಿಚಿತ ವಾಹನ ಚಾಲಕ, ಅಜಾಗರೂಕತೆ ಹಾಗೂ ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಮಾಡಿ ವಾಹನ ಸಮೇತ ಪರಾರಿಯಾಗಿರುತ್ತಾನೆ. ಆದರ ಪರಿಣಾಮ ಅಪರಿಚಿತ ವ್ಯಕ್ತಿಯ ತಲೆ, ಮೈ-ಕೈ, ದೇಹದ ಮೇಲೆ ವಾಹನದ ಚಕ್ರ ಹರಿದ ಪರಿಣಾಮ ತೀವ್ರತರದ ರಕ್ತಗಾಯಗಳಾಗಿ ಅಪರಿಚಿತ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿರುತ್ತಾನೆ. ಈ ಬಗ್ಗೆ ಕೆಂಗೇರಿ ಸಂಚಾರ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ. ಮೃತನ ಶವವು ಆರ್.ಆರ್.ಆಸತ್ರೆಯ ಶವಾಗಾರದಲ್ಲಿರುತ್ತದೆ.

ಮೃತ ಅಪರಿಚಿತ ಗಂಡಸಿನ ಚಹರೆ ವಿವರಗಳು:-

ಹೆಸರು : ಅಪರಿಚಿತ ಗಂಡಸು
ವಯಸ್ಸು : ಸುಮಾರು 35-40 ವರ್ಷ
ಎತ್ತರ : ಸುಮಾರು 5,5 ಅಡಿ
ಕೂದಲು : ಕಪ್ಪು ಕೂದಲು, ಕುರುಚಲು ಗಡ್ಡ, & ಮೀಸೆ ಬಿಟ್ಟಿರುತ್ತಾನೆ.
ಮೈಬಣ್ಣ : ಎಣ್ಣೆಗೆಂಪು ಮುಖ ಜಜ್ಜಿರುತ್ತದೆ.
ಸಾಧಾರಣ ಮೈಕಟ್ಟು, ಮೃತನ ಎಡ ಕೈ ತೋಳಿನಲ್ಲಿ ಅಂಗ್ಲ ಭಾಷೆಯಲ್ಲಿ | Love U
ಅಂಜಲಿ ಎಂಬ ಹೆಚ್ಚೆ ಇರುತ್ತದೆ. ದೇಹದ ಮೇಲೆ 12 ಎಳೆಯ ಬಿಳಿಯ ಜನಿವಾರ ಇರುತ್ತದೆ.
ಧರಿಸಿದ್ದ ಉಡುಪು . ಮೃತನು ಕಾಫಿ/ನೆಷೆ ಬಣ್ಣದ ಅರ್ಧ ತೋಳಿನ ಬನಿಯನ್, ಕಪ್ಪು ಬಣ್ಣದ ಶಾರ್ಟ್ಸ್, ಕಾಫಿ ಉಡುಪು ಬಣ್ಣದ HOT SHOT ಆಂಡರ್‌ವೇರ್ ಧರಿಸಿರುತ್ತಾನೆ.

ಸದರಿ ಗಂಡಸಿನ ವಾರಸುದಾರರು ಅಥವಾ ಪರಿಚಯಸ್ಥರು ಯಾರಾದರೂ ಇದ್ದಲ್ಲಿ, ಹತ್ತಿರದ ಪೊಲೀಸ್ ಕಂಟ್ರೋಲ್ ರೂಂ (112) ಅಥವಾ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಮೊಬೈಲ್ ನಂಬರ್ 9480806021, 08022943013, ಸಂಚಾರ ಪಶ್ಚಿಮ ವಿಭಾಗ ಕಂಟ್ರೋಲ್ ರೂಂ 080-22943030 ಗೆ ಮಾಹಿತಿ ನೀಡಲು ಕೋರಲಾಗಿದೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ: 35 IPS ಅಧಿಕಾರಿಗಳ ವರ್ಗಾವಣೆ, ಬೆಂಗಳೂರಿನ ಬಹುತೇಕರಿಗೆ ಗೇಟ್ಪಾಸ್

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿರುವ ರಾಜ್ಯ ಸರ್ಕಾರ ಒಟ್ಟು 35 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ನಡೆದ ದೊಡ್ಡ ಮಟ್ಟದ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಇದಾಗಿದೆ. ತಡರಾತ್ರಿಯೇ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರದ ಆದೇಶ ಹೊರಬಿದ್ದಿದೆ. ಬೆಂಗಳೂರಿನಲ್ಲಿದ್ದ ಬಹುತೇಕ ಐಪಿಎಸ್ ಅಧಿಕಾರಿಗಳಿಗೆ ಗೇಟ್ ಪಾಸ್ ನೀಡಲಾಗಿದೆ. ವರ್ಗಾವಣೆಗೊಂಡ ಅಧಿಕಾರಿಗಳ ವಿವರ ಕೆಳಕಂಡಂತಿದೆ 1 ಅನುಪಮ್ ಅಗರವಾಲ್ (ಮಂಗಳೂರು […]

Get News on Whatsapp

by send "Subscribe" to 7200024452
Close Bitnami banner
Bitnami