ಬೈಕ್ ಕಳ್ಳತನದ ಆರೋಪಿತನ ಬಂಧನ 05 ಬೈಕ್ ಗಳು ವಶ

0 0
Read Time:2 Minute, 37 Second

ದಿನಾಂಕ:-07.07 2023 ರಂದು ದಾವಣಗೆರೆ ನಗರದ ರಾಂ ಮಂದಿರ ಪಾರ್ಕ ಬಳಿ ಕೆಎ 16 ಎಕ್ಸ್ 5639 ಹೊಂಡಾ ಗ್ರೀಮ್ ಯುಗಾ ಬೈಕ್‌ ಕಳ್ಳತನವಾಗಿರುತ್ತದೆ ಅಂತ ಪವನ್ ರವರು ದೂರು ನೀಡಿದ್ದು ಸ್ವೀಕರಿಸಿ ಬಡಾವಣೆ ಠಾಣಾ ಗುನ್ನೆ ನಂ. 170/2023 ಕಲಂ 379 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.

ದಿನಾಂಕ-18.07.2023 ರಂದು ಬೆಳಗ್ಗೆ ಠಾಣೆಯಲ್ಲಿ ದಾಖಲಾದ ಕನ್ನ ಕಳವು, ಸ್ವತ್ತು ಕಳವು ಹಾಗೂ ಬೈಕ್ ಕಳ್ಳತನ ಪ್ರಕರಣಗಳಲ್ಲಿ ಆರೋಪಿ ಮತ್ತು ಮಾಲು ಪತ್ತೆ ಸಂಬಂಧ ವಿಶೇಷ ಗಸ್ತು ಕರ್ತವ್ಯಕ್ಕೆ ನೇಮಕ ಮಾಡಿದ್ದು, ಅದರಂತೆ ಸಿಬ್ಬಂಧಿಯವರು ಠಾಣಾ ಸರಹದ್ದಿನಲ್ಲಿ ಗಸ್ತು ಮಾಡುತ್ತಾ ಬೆಳಗಿನ ಜಾವ ರಿಂಗ್ ರಸ್ತೆಯ ವಿನಾಯಕ ಬಾರ್ ಮುಂಭಾಗದ ರಸೆಯಲ್ಲಿ ಅನುಮಾನಸ್ಪದವಾಗಿ ಸಿಕ್ಕ ವ್ಯಕ್ತಿಯನ್ನು ವಿಚಾರಿಸಿದಾಗ ಸರಿಯಾದ ಉತ್ತರ ಕೊಡದ ಕಾರಣ ಠಾಣೆಗೆ ಕರೆತಂದು ವಿಚಾರಣೆ ಮಾಡಿದ್ದು, ಸದರಿ ಆರೋಪಿತ ಶಾಹೀದ್, 21 ವರ್ಷ, ದಾವಣಗೆರೆ ಎಂದು ತಿಳಿದು ಬಂದಿದ್ದು, ಈತನು ದಾವಣಗೆರೆ ನಗರದಲ್ಲಿ ಬಡಾವಣೆ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 05 ಬೈಕ್‌ಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿ ಹಾಜರುಪಡಿಸಿದ ಬೈಕಗಳನ್ನು ಅಮಾನತ್ತುಪಡಿಸಿಕೊಂಡು ಆರೋಪಿತನನ್ನು ಘನ ನ್ಯಾಯಲಯಕ್ಕೆ ಹಾಜರುಪಡಿಸಿರುತ್ತೆ.

ಈ ಕಾರ್ಯಾಚರಣೆಯನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ರಾಮಗೊಂಡ ಬಸರಗಿ, ದಾವಣಗೆರೆ ನಗರ ಉಪ-ವಿಭಾಗದ ಪೊಲೀಸ್‌ ಉಪಾಧೀಕ್ಷಕರಾದ ಶ್ರೀ. ಮಲ್ಲೇಶ್ ದೊಡ್ಡಮನಿ ರವರ ಮಾರ್ಗದರ್ಶನಲ್ಲಿ ಪೊಲೀಸ್ ನಿರೀಕ್ಷಕರಾದ ಧನಂಜಯ ರವರ ನೇತೃತ್ವದಲ್ಲಿ ಬಡಾವಣೆ ಪೊಲೀಸ್ ಠಾಣೆಯ ಪಿಎಸ್‌ ಐ ಲತಾ ಎ ತಾಳೆಕ‌ ಸಿಬ್ಬಂದಿಗಳಾದ ಧನಂಜಯ ರಾಜು ಅರಸು ವಿಶ್ವಕುಮಾರ, ಸಿದ್ದೇಶ್‌, ಅರುಣ ಕುಮಾರ, ಸೈಯದ್ ಅಲಿ, ಹನುಮಂತಪ್ಪ, ಗೀತಾ ಹೆಚ್ ಇವರುಗಳು ಆರೋಪಿತರಿಂದ ಕಳ್ಳತನವಾದ 05 ಬೈಕ್ ಒಟ್ಟು ಮೌಲ್ಯ 1,30,000/- ರೂ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಅರುಣ್ ಕೆ. ಐ.ಪಿ.ಎಸ್ ರವರು ಶ್ಲಾಘಿಸಿರುತ್ತಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಕುಖ್ಯಾತ ಇಬ್ಬರು ಮೊಬೈಲ್ ಸುಲಿಗೆಕೋರರ ಬಂಧನ : ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆ

ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ, ಕಾವೇರಿಪುರದ ಬಳಿ ನಡೆದುಕೊಂಡು ಹೋಗುತ್ತಿರುವಾಗ್ಗೆ, ಇಬ್ಬರು ಅಪರಿಚಿತ ಆಸಾಮಿಗಳು ಬಂದು, ಒನ್‌ಪ್ಲಸ್ ಕಂಪನಿಯ ಮೊಬೈಲ್ ಫೋನನ್ನು ಕಿತ್ತುಕೊಂಡು ಪರಾರಿಯಾಗಿರುತ್ತಾರೆಂದು ನೀಡಿದ ದೂರಿನ ಅನ್ವಯ, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಿಸಿಕೊಂಡು, ಕಾರ್ಯಪ್ರವೃತ್ತರಾದ ಪೊಲೀಸರು 18/07/2023 ರಂದು ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ, ಅವರಿಂದ ಸುಮಾರು ರೂ.1,60,000/-ಬೆಲೆ ಬಾಳುವ ಒಟ್ಟು ೧೪ ಮೊಬೈಲ್ ಪೋನ್‌ಗಳನ್ನು ವಶಪಡಿಸಿಕೊಂಡಿರುತ್ತಾರೆ. ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರದ ಪಶ್ಚಿಮ ವಿಭಾಗದ […]

Get News on Whatsapp

by send "Subscribe" to 7200024452
Close Bitnami banner
Bitnami