ರಾತ್ರಿ ಕಳ್ಳತನ ಮಾಡಿದ ಕಳ್ಳರ ಬಂಧನ 86,030 ರೂ ನಗದು ಜಪ್ತಿ

0 0
Read Time:1 Minute, 52 Second

ದಿನಾಂಕ:-11/07/2023 ರಂದು ರಾತ್ರಿ 12-45 ಗಂಟೆ ಸುಮಾರಿಗೆ ಮಂಡಕ್ಕಿ ಭಟ್ಟಿ 01 ನೇ ಕ್ರಾಸ್ ಬಾಲಾಜಿ ಟಾಕೀಸ್ ಹತ್ತಿರದ ಅನ್ವರ್ ಸಾಬ್ ರವರ ಅವಲಕ್ಕಿ ಮೀಲ್‌ನ ಬೀಗವನ್ನು ಹೊಡೆದು ಮೀಲ್‌ನಲ್ಲಿದ್ದ 86,030/- ರೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಆಜಾದ್ ನಗರ ಪೊಲೀಸ್ ಠಾಣೆ ಗುನ್ನೆ ನಂ:65/2023, ಕಲಂ:-457,380 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.
ಮೇಲ್ಕಂಡ ಪ್ರಕರಣದ ಪತ್ತೆಗಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಆರ್.ಬಿ. ಬಸರಗಿ ರವರ ಮತ್ತು ಶ್ರೀ ಮಲ್ಲೇಶ ದೊಡ್ಡಮನಿ, ಡಿವೈಎಸ್‌ಪಿ, ನಗರ ಉಪ ವಿಭಾಗ ದಾವಣಗೆರೆ ರವರ ಮಾರ್ಗದರ್ಶನದಲ್ಲಿ ಶ್ರೀ ಇಮ್ರಾನ್ ಬೇಗ್, ಪೊಲೀಸ್ ನಿರೀಕ್ಷಕರು, ಆಜಾದ್ ನಗರ ಪೊಲೀಸ್ ಠಾಣೆ, ರವರ ನೇತೃತ್ವದಲ್ಲಿ, ಶ್ರೀಮತಿ ಪುಷ್ಪಲತಾ, ಪಿಎಸ್‌ಐ, ಮತ್ತು ಸಿಬ್ಬಂದಿಗಳಾದ ಮಂಜುನಾಥ ನಾಯ್ಕ, ಶ್ರೀ ತಿಪ್ಪೇಸ್ವಾಮಿ ಬಿ, ಶ್ರೀ ಕೃಷ್ಣ ಎನ್, ಶ್ರೀ ವೆಂಕಟೇಶ, ನಾಗರಾಜ ಡಿ ಬಿ, ಹರೀಶ್ ಎಸ್.ಬಿ ಇವರುಗಳನ್ನು ಒಳಗೊಂಡ ತಂಡವು ಪ್ರಕರಣ ದಾಖಲಾಗಿ 24 ಗಂಟೆಯೊಳಗೆ (ದಿನಾಂಕ :- 12/07/2023 ರಂದು) ಮೇಲ್ಕಂಡ ಪ್ರಕರಣದ ಆರೋಪಿತರಾದ 01) ಖಾದರ್ ಬಾಷ 26ವರ್ಷ ದಾವಣಗೆರೆ, 02 ಮುಭಾರಕ್, 27ವರ್ಷ, ದಾವಣಗೆರೆ ರವರನ್ನು ದಸ್ತಗಿರಿ ಮಾಡಿದ್ದು, ಆರೋಪಿತರಿಂದ ಮೇಲ್ಕಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 86,030/- ರೂಗಳನ್ನು ವಶಪಡಿಸಿಕೊಂಡಿರುತ್ತದೆ, ಕಾರ್ಯಾಚರಣೆಯ ತಂಡವನ್ನು ಮಾನ್ಯ ಪೊಲೀಸ್ ಅಧೀಕ್ಷಕರವರಾದ ಡಾ.ಅರುಣ್ ಕೆ., ಐ.ಪಿ.ಎಸ್‌ ರವರು ಪ್ರಶಂಸನೆ ವ್ಯಕ್ತ ಪಡಿಸಿರುತ್ತಾರೆ.

Happy
Happy
100 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಗಾಂಜಾ ಮಾರಾಟಗಾರರ ಬಂಧನ, 610 ಗ್ರಾಂ ಗಾಂಜಾ ವಶ

ಇತ್ತೀಚೆಗೆ ಕಲಬುರಗಿ ನಗರದಲ್ಲಿ ಗಾಂಜಾ ಪ್ರಕರಣಗಳು ವರದಿಯಾಗುತಿದ್ದು ಕಾರಣ ಮತ್ತಷ್ಟು ಗಾಂಜಾ ಪ್ರಕರಣಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಮಾನ್ಯ ಶ್ರೀ ಅಡೂರು ಶ್ರೀನಿವಾಸುಲು ಐ.ಪಿ.ಎಸ್. (ಕಾ&ಸು) ಉಪ- ಪೊಲೀಸ್‌ ಆಯುಕ್ತರು ಕಲಬುರಗಿ ನಗರ, ಮಾನ್ಯ ಶ್ರೀ ಎ ಚಂದ್ರಪ್ಪಾ ಕೆ.ಎಸ್.ಪಿ.ಎಸ್.,(ಅ&ಸಂ) ಉಪ-ಪೊಲೀಸ್‌ ಆಯುಕ್ತರು ಕಲಬುರಗಿ ನಗರ ಹಾಗೂ ದಕ್ಷಿಣ ಉಪ-ವಿಭಾಗ ಎ.ಸಿ.ಪಿ ರವರಾದ ಶ್ರೀ ಭೂತೇಗೌಡ ವಿ.ಎಸ್ ರವರ ಮಾರ್ಗದರ್ಶನದಲ್ಲಿ ಶ್ರೀ ಸಚಿನ್ ಎಸ್ ಚಲವಾದಿ ಪಿ.ಐ ಬ್ರಹ್ಮಪೂರ ಪೊಲೀಸ್ ಠಾಣೆ […]

Get News on Whatsapp

by send "Subscribe" to 7200024452
Close Bitnami banner
Bitnami