ದ್ವಿ-ಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಆರೋಪಿಯ ಬಂಧನ : ಚನ್ನಮ್ಮಕೆರೆ ಪೊಲೀಸ್ ಠಾಣೆಯ ಕಾರ್ಯಾಚರಣೆ

0 0
Read Time:1 Minute, 44 Second

ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದ್ವಿಚಕ್ರ ವಾಹನದ ಕಳವು ಪ್ರಕರಣಗಳಲ್ಲಿ ತನಿಖೆಯಲ್ಲಿರುವ ಸಮಯದಲ್ಲಿ ರೂಢಿಗತ ಅಪರಾಧಿಗಳನ್ನು ವಿಚಾರಣೆ ಮಾಡುವಾಗ, ಕೆ.ಎಸ್. ಲೇಔಟ್‌ನ ಒಬ್ಬ ಆಸಾಮಿಯು ತಾನು ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದು, ಆತನನ್ನು ದಸ್ತಗಿರಿ ಮಾಡಿ, ಆರೋಪಿಯ ವಶದಿಂದ 7 ದ್ವಿ-ಚಕ್ರ ವಾಹನಗಳ ಅಂದಾಜು ಬೆಲೆ 3,60,000/-ರೂ ಮೌಲ್ಯದ ಮಾಲುಗಳನ್ನು ಆರೋಪಿಯಿಂದ ಅಮಾನತ್ತುಪಡಿಸಿಕೊಳ್ಳಲಾಗಿರುತ್ತದೆ. ಈತನು ತನ್ನ ವಿಲಾಸಿ ಜೀವನಕ್ಕಾಗಿ ದ್ವಿ-ಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಎಂಬುದಾಗಿ ತನಿಖಾಧಿಕಾರಿಯವರಿಗೆ ತಿಳಿಸಿರುತ್ತಾರೆ.

ಬೆಂಗಳೂರು ನಗರ, ದಕ್ಷಿಣ ವಿಭಾಗದ ಉಪ-ಪೊಲೀಸ್‌ ಆಯುಕ್ತರು ಪಿ. ಕೃಷ್ಣಕಾಂತ್, ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ವಿ.ವಿ ಪುರಂ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ನಾಗರಾಜ ಜಿ ರವರ ಉಸ್ತುವಾರಿಯಲ್ಲಿ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯ ಪೊಲೀಸ್‌ ಇನ್ಸ್‌ಪೆಕ್ಟರ್ ಜಿ. ಉದಯರವಿ ರವರು ಹಾಗೂ ಪೊಲೀಸ್‌ ಸಿಬ್ಬಂದಿರವರುಗಳು
ಆರೋಪಿಯನ್ನು ಬಂಧಿಸಿ, ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರು ತ್ತಾರೆ.

ಮೇಲೆ ತಿಳಿಸಿದ ಅಧಿಕಾರಿ ಹಾಗೂ ಸಿಬ್ಬಂದಿರವರುಗಳನ್ನು ಪೊಲೀಸ್‌ ಆಯುಕ್ತರು, ಬೆಂಗಳೂರು ನಗರ ಹಾಗೂ ಅಪರ ಪೊಲೀಸ್ ಆಯುಕ್ತರು, ಪಶ್ಚಿಮ, ರವರು ಶ್ಲಾಘಿಸಿರುತ್ತಾರೆ.

ವರದಿ : ಆಂಟೋನಿ ಬೇಗೂರು

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಸ್ಟೇಷನ್‌ ಬಜಾರ ಪೊಲೀಸರಿಂದ ಬೈಕ್‌ ಕಳ್ಳರ ಬಂಧನ 13 ದ್ವಿ-ಚಕ್ರ ವಾಹನಗಳು ವಶ

ಕಲಬುರಗಿ ನಗರದ ವಿವಿಧ ಏರಿಯಾಗಳಲ್ಲಿ ಮೋಟಾರ್ ಸೈಕಲ್ ಕಳ್ಳತನ ಪ್ರಕರಣಗಳು ಜರುಗುತ್ತಿದ್ದು, ಮೋಟಾರ್ ಸೈಕಲ್ ಪತ್ತೆಗಾಗಿ ಕಲಬುರಗಿ ನಗರ ಮಾನ್ಯ ಶ್ರೀ ಅಡೂರು ಶ್ರೀನಿವಾಸುಲು ಐ.ಪಿ.ಎಸ್ (ಕಾ&ಸೂ) ಉಪ-ಪೊಲೀಸ ಆಯುಕ್ತರು ಕಲಬುರಗಿ ನಗರ, ಮತ್ತು ಶ್ರೀ ಐ.ಎ.ಚಂದ್ರಪ್ಪ ಕೆ.ಎಸ್.ಪಿ.ಎಸ್ (ಅ&ಸಂ) ಉಪ-ಪೊಲೀಸ ಆಯುಕ್ತರು ಕಲಬುರಗಿ ನಗರ ರವರ ಮಾರ್ಗದರ್ಶನದಲ್ಲಿ ಹಾಗೂ ಶ್ರೀ ಭೂತೇಗೌಡ ಸಹಾಯಕ ಪೊಲೀಸ ಆಯುಕ್ತರು ದಕ್ಷಿಣ ಉಪ ವಿಭಾಗ ರವರುಗಳ ನೇತೃತ್ವದಲ್ಲಿ ಸ್ಟೇಷನ ಬಜಾರ ಪೊಲೀಸ ಠಾಣೆಯ […]

Get News on Whatsapp

by send "Subscribe" to 7200024452
Close Bitnami banner
Bitnami