ಸರಗಳ್ಳತನ ಮಾಡಿ ಹೊರರಾಜ್ಯದಲ್ಲಿ ತಲೆಮರೆಸಿಕೊಳ್ಳುತ್ತಿದ್ದ ಇಬ್ಬರು ಆರೋಪಿಗಳ ಬಂಧನ : ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸುಂದರ್, ಹಾಗೂ ತಂಡದ ಕಾರ್ಯಾಚರಣೆ

0 0
Read Time:2 Minute, 45 Second

ಬೆಂಗಳೂರು ನಗರದ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಒಟ್ಟು 113 ಸರಣಿ ಸರಗಳತನ ಪ್ರಕರಣಗಳು ದಾಖಲಾಗಿದ್ದು, ಈ ಬಗ್ಗೆ ಈಶಾನ್ಯ ವಿಭಾಗದ ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸುಂದರ, ಕೆ.ಎಲ್.ಪ್ರಭು ಪಿಎಸ್‌ ಐ, ಮತ್ತು ಅಪರಾದ ಸಿಬ್ಬಂದಿಗಳನೊಳ್ಳಗೊಂಡ ವಿಶೇಷ ತಂಡವನ್ನು ರಚಿಸಲಾಗಿರುತ್ತದೆ.

ವಿಶೇಷ ತಂಡವು ಪ್ರಕರಣಗಳ ತನಿಖೆಯನ್ನು ಕೈಗೊಂಡು ಮಾಹಿತಿಯನ್ನು ಸಂಗ್ರಹಿಸಿ, ಸದರಿ ಪ್ರಕರಣದಲ್ಲಿ ಭಾಗಿಯಾದ ಮೈಸೂರು ಮೂಲದ ಇಬ್ಬರು ಆಸಾಮಿಗಳನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ. ಆರೋಪಿಗಳು ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಾದ ಬೆಂಗಳೂರು ನಗರ, ಮೈಸೂರು, ರಾಮನಗರ, ತುಮಕೂರು, ಹಾಸನ, ಕೊಡಗು, ಮಂಡ್ಯ ಜಿಲ್ಲೆಗಳಲ್ಲಿ ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದು ಹಾಗೂ ದರೋಡೆ ಪ್ರಕರಣಗಳಲ್ಲಿ ಬಾಗಿಯಾಗಿದ್ದ ಬಗ್ಗೆ ತನಿಖೆಯಿಂದ ದೃಢಪಟಿರುತ್ತೆ.

ಆರೋಪಿಗಳ ಮಾಹಿತಿ ಮೇರೆಗೆ, ಈ ಹಿಂದೆ ಕಳ್ಳತನ ಹಾಗೂ ದರೋಡೆ ಮಾಡಿ ವರದಿಯಾಗಿದ್ದ ಪ್ರಕರಣಗಳಾದ ಕೊಡಿಗೇಹಳ್ಳಿ, ಮಾರತ್ತಹಳ್ಳಿ, ರಾಮಮೂರ್ತಿ ನಗರ, ಗಿರಿನಗರ, ಬನಶಂಕರಿ, ಜಯನಗರ, ದೊಡ್ಡಬಳ್ಳಾಪುರ, ಹಾಸನ ಎಕ್ಸ್‌ಟೇಷನ್ ಪೊಲೀಸ್ ಠಾಣೆಯ ತಲಾ ಒಂದು ಪ್ರಕರಣಗಳು ಮತ್ತು ಅನ್ನಪೂರ್ಣೇಶ್ವರ ನಗರ ಪೊಲೀಸ್ ಠಾಣೆಯ ಎರಡು ಪ್ರಕರಣಗಳು ಸೇರಿದಂತೆ ಒಟ್ಟು 13 ಸರಗಳ್ಳತನ ಪ್ರಕರಣಗಳು ಪತ್ತೆಯಾಗಿರುತ್ತದೆ. ಅಲ್ಲದೆ ಮೈಸೂರಿನ 13 ದ್ವಿ-ಚಕ್ರ ವಾಹನ ಕಳ್ಳತನ ಪ್ರಕರಣಗಳು ಸಹ ಪತ್ತೆಯಾಗಿರುತ್ತವೆ.

ಆರೋಪಿಗಳು ಕಳವು ಮಾಡಿದ್ದ ಚಿನ್ನದ ಸರಗಳನ್ನು ಅನಂತಪುರ ಜಿಲ್ಲೆಯ ರಾಯದುರ್ಗ ಆಸಾಮಿಗೆ ಮಾರಾಟ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದ್ದರಿಂದ ಆಸಾಮಿಯನ್ನು ಸಹ ದಸ್ತಗಿರಿ ಮಾಡಲಾಗಿರುತ್ತದೆ.

ಸದರಿ ವಿಶೇಷ ತಂಡಕ್ಕೆ ಸ್ಫೂರ್ತಿ ನೀಡಿ ಮೇಲ್ವಿಚಾರಣೆ ವಹಿಸಿದ ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತರು ಹಾಗೂ ಯಲಹಂಕ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಸದರಿ ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಈ ಮೇಲ್ಕಂಡ ಅಧಿಕಾರಿಗಳ ಮತ್ತು ಸಿಬ್ಬಂದಿಯವರುಗಳ ಕರ್ತವ್ಯವನ್ನು ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಮತ್ತು ಅಪರ ಪೊಲೀಸ್ ಆಯುಕ್ತರು ಪೂರ್ವ ರವರು ಪ್ರಶಂಸಿರುತ್ತಾರೆ.

ವರದಿ : ಆಂಟೋನಿ ಬೇಗೂರು

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಒರಿಸಾ ರಾಜ್ಯದಿಂದ ಬೆಂಗಳೂರು ನಗರದಲ್ಲಿ ಮಾರಾಟಕ್ಕೆ ತಂದಿದ್ದ 14 ಲಕ್ಷ ಮೌಲ್ಯದ 28 ಕೆ.ಜಿ ತೂಕದ ಗಾಂಜಾ ಎಂಬ ಮಾದಕ ವಸ್ತು ವಶಪಡಿಸಿಕೊಂಡು, 5 ಜನ ಹೊರ ರಾಜ್ಯ ಆರೋಪಿಗಳ ಬಂಧನ : ಯಲಹಂಕ ಪೊಲೀಸ್ ಕಾರ್ಯಾಚರಣೆ

ದಿನಾಂಕ:27/06/2023 ರಂದು ಒರಿಸ್ಸಾ ರಾಜ್ಯದಿಂದ ಅಪರಿಚಿತ ಆಸಾಮಿಗಳು ಬೃಹತ್ ಪ್ರಮಾಣದಲ್ಲಿ ಗಾಂಜಾ ಎಂಬ ಮಾದಕ ವಸ್ತುವನ್ನು ಬೆಂಗಳೂರು ನಗರದಲ್ಲಿ ಮಾರಾಟ ಮಾಡಲು ಬರುತ್ತಿರುತ್ತಾರೆಂಬ ಮಾಹಿತಿ ಮೇರೆಗೆ ದಾಳಿ ಕ್ರಮ ಜರುಗಿಸಿ 5 ಜನ ಆಸಾಮಿಗಳನ್ನು ವಶಕ್ಕೆ ಪಡೆದಿರುತ್ತಾರೆ. ಅವರುಗಳ ಬಳಿಯಿದ್ದ 28 ಕೆ.ಜಿ ತೂಕದ ಗಾಂಜಾ ವಶಪಡಿಸಿಕೊಂಡಿರುತ್ತದೆ. ಇದರ ಒಟ್ಟು ಮೌಲ್ಯ 14 ಲಕ್ಷಗಳಾಗಿರುತ್ತದೆ. ಆರೋಪಿಗಳ ಬಳಿಯಿದ್ದ 05 ಮೊಬೈಲ್‌ಗಳನ್ನು ಮುಂದಿನ ತನಿಖೆಗಾಗಿ ವಶಪಡಿಸಿಕೊಂಡಿರುತ್ತದೆ. ಆರೋಪಿಗಳು ಒರಿಸ್ಸಾ ರಾಜ್ಯದ ಪಂಡಿಮುಂಡಾ […]

Get News on Whatsapp

by send "Subscribe" to 7200024452
Close Bitnami banner
Bitnami