ಕಳ್ಳತನವಾಗಿದ್ದ 04 ಬೈಕ್‌ಗಳು ಪತ್ತೆ : ದಾವಣಗೆರೆ ಪೊಲೀಸ್

3 0
Read Time:2 Minute, 33 Second

ದಾವಣಗೆರೆ : ದಿನಾಂಕ: 21.04.2023 ರಂದು ದಾವಣಗೆರೆ ನಗರದ ಪಿ.ಜೆ. ಬಡಾವಣೆಯ ಮೃತ್ಯುಂಜಯ ನರ್ಸಿಂಗ್ ಹೋಂ ಮುಂಭಾಗ, ಕೆಎ 17 ಹೆಚ್ ಎ 3280 ಸ್ಟೆಂಡರ್ ಪ್ಲಸ್ ಬೈಕ್ ಕಳ್ಳತನವಾಗಿರುತ್ತದೆ ಅಂತ ಸುನೀಲ್ ರವರು ದೂರು ನೀಡಿದ್ದು ಬಡಾವಣೆ ಠಾಣಾ ಗುನ್ನೆ ನಂ. 107/2023 ಕಲಂ 379 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.

ದಿನಾಂಕ: 26.06.2023 ರಂದು ಠಾಣಾ ಸರಹದ್ದಿನಲ್ಲಿ ಚೀತಾ -9 ಸಿಬ್ಬಂದಿ ಪ್ರವೀಣ್ ರವರು ಗಸ್ತಿನಲ್ಲಿದ್ದು ಅನುಮಾನಾಸ್ಪದವಾಗಿ ಸಿಕ್ಕ ಬಾಲಕನನ್ನು ವಿಚಾರ ಮಾಡಿದ್ದು, ಬೈಕ್ ದಾಖಲಾತಿಗಳನ್ನು ಹಾಜರು ಪಡಿಸದ ಕಾರಣ ಠಾಣೆಗೆ ಕರೆದುಕೊಂಡು ಬಂದು ಪಿ.ಎಸ್.ಐ ಮಾಳವ್ವ ಹೆಚ್. ರವರ ಮುಂದೆ ಹಾಜರುಪಡಿಸಿದ್ದು, ಸದರಿ ಬಾಲಕ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಅಂತ ಖಚಿತ ಪಡಿಸಿಕೊಂಡು ವಿಚಾರ ಮಾಡಿ ಹೇಳಿಕೆ ಪಡೆಯಲಾಗಿ ಸದರಿ ಬಾಲಕ ದಾವಣಗೆರೆ ನಗರದಲ್ಲಿ ಬಡಾವಣೆ ಠಾಣಾ ವ್ಯಾಪ್ತಿಯಲ್ಲಿ 02 ಬೈಕ್ ಗಳು, ಬಸವನಗರ ಠಾಣಾ ವ್ಯಾಪ್ತಿಯಲ್ಲಿ 01 ಬೈಕ್ ಮತ್ತು ಗಾಂಧಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 01 ಬೈಕ್ ಕಳ್ಳತನ ಮಾಡಿರುವುದಾಗಿ ಒಪ್ಪಿ ಹಾಜರುಪಡಿಸಿದ ಬೈಕಗಳನ್ನು ಅಮಾನತ್ತುಪಡಿಸಿಕೊಂಡು, ಸದರಿ ಬಾಲಕನನ್ನು ಸುರಕ್ಷತೆಯ ಸಲುವಾಗಿ ಬಾಲ ನ್ಯಾಯ ಮಂದಿರಕ್ಕೆ ಬಿಡಲಾಯಿತು.

ಈ ಕಾರ್ಯಾಚರಣೆಯನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ. ರಾಮಗೊಂಡ ಬಸರಗಿ ರವರು ಹಾಗೂ ದಾವಣಗೆರೆ ನಗರ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ. ಮಲ್ಲೇಶ್ ದೊಡ್ಡಮನಿ ರವರ ಮಾರ್ಗದರ್ಶನಲ್ಲಿ ಪೊಲೀಸ್ ನಿರೀಕ್ಷಕರಾದ ಶ್ರೀ ಧನಂಜಯ ರವರ ನೇತೃತ್ವದಲ್ಲಿ ಬಡಾವಣೆ ಪೊಲೀಸ್ ಠಾಣೆಯ ಪಿಎಸ್‌ಐ ಮಾಳವ್ವ ಹೆಚ್. ಸಿಬ್ಬಂದಿಗಳಾದ ಪ್ರವೀಣ್, ಸಿದ್ದೇಶ್‌, ಅರುಣ ಕುಮಾರ, ಸಯ್ಯದ್, ಗೀತಾ ಇವರುಗಳು ಕಳ್ಳತನವಾದ 04 ಬೈಕ್ ಒಟ್ಟು ಮೌಲ್ಯ 1,50,000/- ರೂ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಡಾ. ಅರುಣ್ ಕೆ. ಐ.ಪಿ.ಎಸ್ ರವರು ಶ್ಲಾಘಿಸಿರುತ್ತಾರೆ.

Happy
Happy
100 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಬೆಂಗಳೂರು-ಮೈಸೂರು ಎಕ್ಸಪ್ರೆಸ್‌ವೇನಲ್ಲಿ ಹೆಚ್ಚುತ್ತಿರುವ ಅಪಘಾತ ; ಎಡಿಜಿಪಿ ಪರಿಶೀಲನೆ

ಮೈಸೂರು ಎಕ್ಸಪ್ರೆಸ್‌ವೇನಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಎಡಿಜಿಪಿ ಅಲೋಕ್ ಕುಮಾರ್ ಅವರು ಬೆಂಗಳೂರು ದಕ್ಷಿಣ ತಾಲೂಕಿನ ಬಾಬಾಸಾಹೇಬರ ಪಾಳ್ಯ ಬಳಿ ಹೈವೇಯನ್ನು ಪರಿಶೀಲಿಸಿದ್ದಾರೆ. ಬೆಂಗಳೂರು-ಮೈಸೂರು ಎಕ್ಸಪ್ರೆಸ್‌ನಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಎಡಿಜಿಪಿ ಅಲೋಕ್ ಕುಮಾರ್ ಅವರು ಬೆಂಗಳೂರು ದಕ್ಷಿಣ ತಾಲೂಕಿನ ಬಾಬಾಸಾಹೇಬರ ಪಾಳ್ಯ ಬಳಿ ಹೈವೇಯನ್ನು ಪರಿಶೀಲಿಸಿದ್ದಾರೆ.ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ಎನ್‌ಹೆಚ್‌ಎಐ (NHAI), ಪಿಡಬ್ಲ್ಯೂ, ಆರ್‌ಟಿಓ, ಆರೋಗ್ಯ ಅಧಿಕಾರಿಗಳು, ಐಜಿಪಿ ರವಿಕಾಂತೇಗೌಡ ಹಾಗೂ ಎಸ್‌ಪಿ ಕಾರ್ತಿಕ್ […]

Get News on Whatsapp

by send "Subscribe" to 7200024452
Close Bitnami banner
Bitnami