ಬೆಂಗಳೂರು ನಗರದ ಪ್ರತಿಷ್ಠಿತ ಸ್ಟಾರ್ ಹೋಟೆಲ್‌ ನಲ್ಲಿ ರೂಮ್ ಬುಕ್ ಮಾಡಿಕೊಂಡು “ಅಂದರ್-ಬಾಹರ್ ಎಂಬ ಜೂಜಾಟವನ್ನು ಆಡಿಸುತ್ತಿದ್ದ ಕಿಂಗ್ ಪಿನ್ ಸೇರಿ ಜೂಜಾಟದಲ್ಲಿ ತೊಡಗಿದ್ದ 12 ಜನರ ಬಂಧನ. ನಗದು ಹಣ 11,00,000/-ರೂ ವಶ

0 0
Read Time:2 Minute, 14 Second

ದಿನಾಂಕ 22.00,2023 ರಂದು ಸಿ.ಸಿ.ಬಿ ಪೊಲೀಸರಿಗೆ ಬಂದ ಮಾಹಿತಿ ಮೇರೆಗೆ ಪ್ರತಿಷ್ಠಿತ ಸ್ಟಾರ್ ಹೋಟೆಲ್‌ನಲ್ಲಿ ಅಂದರ್-ಬಾಹರ್ ಎಂಬ ಜೂಜಾಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತಿರುತ್ತದೆ.

ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಪ್ರತಿಷ್ಠಿತ ಸ್ಟಾರ್ ಹೋಟೆಲ್‌ಗೆ ದಾಳಿ ನಡೆಸುವ ಸಲುವಾಗಿ ಹೋಗಿದ್ದು,ಹೋಟೆಲ್‌ನಲ್ಲಿ ಯಾವುದೇ ಮಾಹಿತಿ ಸಿಗಬಾರದೆಂದು ಹಾಗು ಯಾರಿಗೂ ರೂಮ್‌ಗೆ ಸುಲಭವಾಗಿ ಪ್ರವೇಶಿಸಲು ಸಾಧ್ಯವಾಗಬಾರದೆಂಬ ಉದ್ದೇಶದಿಂದ ಆಕ್ಸೆಸ್‌ ಕಾರ್ಡ್ ಮೂಲಕ ಮಾತ್ರ ಪ್ರವೇಶ ಅನುಮತಿಸುವಂತಹ ಸೂಟ್ ರೂಮ್ ಅನ್ನು ಎಂ.ಎಂ.ಟಿ ಆಪ್ ಮೂಲಕ, ತನ್ನ ಹಾಗು ತನ್ನ ಸ್ನೇಹಿತನ ಹೆಸರಿನಲ್ಲಿ ಬುಕ್ ಮಾಡಿಕೊಂಡು, ಮೊಬೈಲ್ ಪೋನ್ ಮೂಲಕ ತನಗೆ ಪರಿಚಯವಿದ್ದ ಪಂಟರುಗಳನ್ನು ಸಂಪರ್ಕಿಸಿ: ಹೋಟೆಲ್ ಬಳಿ ಕರೆಸಿಕೊಂಡು ಒಬ್ಬೊಬ್ಬರನ್ನಾಗಿ ಕರೆದುಕೊಂಡು ಹೋಗಿ ತನ್ನ ಬಳಿಯಿದ್ದ ರೂಮ್‌ನ ಆಕ್ಸೆಸ್ ಕಾರ್ಡ್ ಬಳಸಿ ರೂಮ್‌ಗೆ ಬಿಟ್ಟು ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್‌ ಬಾಹರ್ ಇಸ್ಪೀಟ್ ಆಟವನ್ನಾಡಿಸುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಸಿ.ಸಿ.ಬಿ, ಅಧಿಕಾರಿಗಳು ಸದರಿ ಸ್ಥಳದ ಮೇಲೆ ದಾಳಿ ಕೈಗೊಂಡು ಅಕ್ರಮ ಜೂಜಾಟದಲ್ಲಿ ತೊಡಗಿದ್ದ 11 ಜನ ಆಸಾಮಿಗಳನ್ನು ಹಾಗು ಪೊಲೀಸರಿಗೆ ಮಾಹಿತಿ ಸಿಗದಂತೆ ಅವರುಗಳನ್ನು ಅಂದ‌ರ್ ಬಾಹರ್ ಇಸ್ಪೀಟ್ ಆಟವಾಡಲು ತಾನು ಬುಕ್ ಮಾಡಿ ಸ್ಟಾರ್ ಹೋಟೆಲ್‌ ಸೂಟ್ ರೂಮ್‌ಗೆ ಕರೆದುಕೊಂಡು ಹೋಗಿ ಆಕ್ಸೆಸ್ ಕಾರ್ಡ್ ಬಳಸಿ ರೂಮ್‌ಗೆ ಬಿಡುತ್ತಿದ್ದ ಕಿಂಗ್‌ ಪಿನ್ ಒಬ್ಬನನ್ನು ಬಂಧಿಸಿ ಅವರುಗಳಿಂದ ಒಟ್ಟು 11,00,000/-ರೂ (ಹನ್ನೊಂದು ಲಕ್ಷ ರೂಗಳು ಮಾತ್ರ) ನಗದು ಹಣವನ್ನು ವಶ ಪಡಿಸಿಕೊಂಡು ಮುಂದಿನ ಕ್ರಮದ ಬಗ್ಗೆ ಹಲಸೂರು ಪೊಲೀಸ್ ಠಾಣೆಗೆ ದೂರು ನೀಡಿ ಪ್ರಕರಣವನ್ನು ದಾಖಲಿಸಲಾಗಿರುತ್ತದೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಎರಡು ಗಂಟೆಯೊಳಗೆ ಕೊಲೆ ಮಾಡಿದ್ದ ಆರೋಪಿತರ ಬಂಧನ : ಅನ್ನಪೂರ್ಣೀಶ್ವರಿನಗರ ಪೊಲೀಸರ ಕಾರ್ಯಾಚರಣೆ

ಬೆಂಗಳೂರು: 1/06/2023 ರಂದು ರಾತ್ರಿ 11.30 ಗಂಟೆಗೆ ಬೆಂಗಳೂರಿನ ಶ್ರೀಗಂಧಕಾವಲಿನ ಆರೋಗ್ಯ ಬಡಾವಣೆಯ 6ನೇ ಎ ಕ್ರಾಸ್ ಮತ್ತು 4ನೇ ಮೈನ್ ಜಂಕ್ಷನ್ನಲ್ಲಿ ವಿಜಯ್‌ ಕುಮಾರ್ ಎಂಬಾತನು ಮಧ್ಯಪಾನ ಮಾಡಲು ಹಣ ಕೊಡಲಿಲ್ಲವೆಂದು ಆರೋಪಿತರಾದ ಗಿರೀಶ ಮತ್ತು ಲೋಕೇಶ್ ರವರು ವಿಜಯಕುಮಾರ್ ಎಂಬಾತನಿಗೆ ಸಿಮೆಂಟ್ ಹಾಲೋಬ್ಲಾಕ್ ಅನ್ನು ಆತನ ತಲೆಯ ಮೇಲೆ ಎತ್ತಿಹಾಕಿ ಕೊಲೆ ಮಾಡಿರುತ್ತಾರೆ. ಈ ಕುರಿತು ಅನ್ನಪೂರ್ಣೆಶ್ವರಿನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.ಪ್ರಕರಣ ದಾಖಲಾದ ಎರಡು […]

Get News on Whatsapp

by send "Subscribe" to 7200024452
Close Bitnami banner
Bitnami