ಯುವಕನಿಂದ ಪೊಲೀಸ್ ಮೇಲೆ ಹಲ್ಲೆ : ಪೀಣ್ಯ ಪೊಲೀಸ್ ಠಾಣೆ

0 0
Read Time:1 Minute, 55 Second

ಬಿಎಂಟಿಸಿ ಬಸ್‍ನಲ್ಲಿ ಟಿಕೆಟ್ ತೆಗೆದುಕೊಳ್ಳಲು ನಿರಾಕರಿಸಿ ತಕರಾರು ಮಾಡಿದ್ದ ಯುವಕನೊಬ್ಬನನ್ನು ಚಾಲಕ ಹಾಗೂ ನಿರ್ವಾಹಕರೊಂದಿಗೆ ಜಗಳ ಮಾಡಿದ್ದು ಪೊಲೀಸ್ ಠಾಣೆಯಲ್ಲಿ ಎಎಸ್‍ಐ ಮತ್ತು ಪಿಎಸ್‍ಐ ಮೇಲೆಯೂ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ವಿದ್ಯಾರಣ್ಯಪುರಂನ ನಿವಾಸಿ ಮೌನೇಶ್ ಎಂಬ ಯುವಕ ಪೀಣ್ಯ ಸಮೀಪ ಬಸ್ಸು ಹತ್ತಿದ್ದು, ತಮ್ಮ ಬಳಿ ವಿದ್ಯಾರ್ಥಿ ಪಾಸ್ ಇದೆ ಎಂದು ತಿಳಿಸಿದ್ದಾನೆ. ನಿರ್ವಾಹಕರು ಪಾಸ್ ತೋರಿಸುವಂತೆ ಸೂಚಿಸಿದ್ದಾರೆ. ಮೊಬೈಲ್‍ನಲ್ಲಿದೆ ಎಂದು ಹೇಳುತ್ತಲೇ ಪಾಸ್ ತೋರಿಸಲು ತಗಾದೆ ತೆಗೆದಿದ್ದಾನೆ. ಈ ಹಂತದಲ್ಲಿ ಚಾಲಕ ಹಾಗೂ ನಿರ್ವಾಹಕರೊಂದಿಗೆ ಆತ ವಾಗ್ವಾದ ನಡೆಸಿದ.

ಬಸ್‍ನಲ್ಲಿದ್ದವರು ಮದ್ಯ ಪ್ರವೇಶ ಮಾಡಿ ಪಾಸ್ ತೋರಿಸಬೇಕು ಇಲ್ಲವೇ ಟಿಕೆಟ್ ತೆಗೆದುಕೊಳ್ಳಬೇಕೆಂದು ತಾಕೀತು ಮಾಡಿದ್ದಾರೆ. ಆತ ಯಾವುದಕ್ಕೂ ಜಗ್ಗದೇ ಇದ್ದಾಗ ಪೀಣ್ಯ ಪೊಲೀಸ್ ಠಾಣೆ ಬಳಿಗೆ ಬಸ್ಸನ್ನು ತೆಗೆದುಕೊಂಡು ಹೋಗಲಾಗಿದೆ. ಅಲ್ಲಿ ಎಎಸ್‍ಐ ವಿಚಾರಣೆ ನಡೆಸುವಾಗ ಅವರ ಮೇಲೂ ಹಲ್ಲೆ ನಡೆಸಿದ್ದಾನೆ.
ತಕ್ಷಣವೇ ಠಾಣೆಗೆ ಬಂದ ಪಿಎಸ್‍ಐ ಸಿದ್ದು ಹೂಗಾರ್ ಯುವಕನನ್ನು ವಿಚಾರಣೆ ಮಾಡಲು ಮುಂದಾದಾಗ ಅವರ ದವಡೆಗೂ ಪಂಚ್ ಮಾಡಿದ್ದಾನೆ. ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಯುವಕನ ತಂದೆ-ತಾಯಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಪ್ರಕರಣ ದಾಖಲಿಸಿ ಯುವಕನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

A.Antony Raju- Citizen Reporter-Karnataka

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಬಾಡಿಗೆ ಕೇಳುವ ನೆಪದಲ್ಲಿ ಬಂದು ವೃದ್ಧೆಗೆ ಹಲ್ಲೆ ಮಾಡಿ, ಚಿನ್ನದ ಸರ ಸುಲಿಗೆ ಮಾಡಿದ ಆರೋಪಿತೆಯ ಬಂಧನ, 20 ಗ್ರಾಂ ಚಿನ್ನಸರ ವಶ.

ಶಾಂತಮ್ಮ, 60 ವರ್ಷ ರವರು ನಂದಿನಿಲೇಔಟ್ ಪೊಲೀಸ್‌ ಠಾಣಾ ವ್ಯಾಪ್ತಿಯ ಲಗ್ಗೆರೆ. ವಾಸಿಯಾಗಿದ್ದು, ಈಕೆ ಒಂಟಿಯಾಗಿ ವಾಸವಿದ್ದು, ಈಕೆಯ ಮನೆಗೆ ಒಬ್ಬ ಅಪರಿಚಿತ 38-40 ವರ್ಷದ ಮಹಿಳೆಯೊಬ್ಬಳು ಶಾಂತಮ್ಮ ರವರ ಮನೆಗೆ ಆಗಾಗ್ಗೆ ಮನೆ ಬಾಡಿಗೆ ಇದೆಯೇ ಎಂದು ಕೇಳುವ ನೆಪದಲ್ಲಿ ಬರುತ್ತಿದ್ದು, ದಿನಾಂಕ 25-05-2023 ರಂದು ಬೆಳಗ್ಗೆ 09-30 ಗಂಟೆಯಿಂದ 12-00 ಗಂಟೆಯ ನಡುವೆ ಮನೆಗೆ ಬಂದು ಹಾಲನ್ನು ಉಕ್ಕಿಸುವುದಾಗಿ ಅಡುಗೆ ಮನೆಗೆ ಪಿರಾದಿಯನ್ನು ಕರೆದುಕೊಂಡು ಹೋಗಿ ದೊಣ್ಣೆಯಿಂದ […]

Get News on Whatsapp

by send "Subscribe" to 7200024452
Close Bitnami banner
Bitnami