ಪರ ಪತ್ನಿಯ ಮೇಲಿನ ಆಸೆಗಾಗಿ ಆಕೆಯ ಪತಿಯನ್ನು ಮನೆಯಲ್ಲೇ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ

1 0
Read Time:2 Minute, 38 Second

ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಉದಯನಗರದ 2ನೇ ಕ್ರಾಸ್, ಶಿವ ದೇವಸ್ಥಾನ ಸಮೀಪದ ನಿವಾಸಿ ಉದಯ್‍ಕುಮಾರ್(33) ಕೊಲೆಯಾದ ವ್ಯಕ್ತಿ.

ಉದಯ್‍ಕುಮಾರ್ ಅವರು ವೃತ್ತಿಯಲ್ಲಿ ದ್ವಿಚಕ್ರ ವಾಹನದ ಮೆಕ್ಯಾನಿಕ್. ಇವರು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಉದಯನಗರದಲ್ಲಿ ವಾಸವಾಗಿದ್ದರು. ಮಕ್ಕಳಿಗೆ ಅಮ್ಮ(ದಡಾರ) ಆಗಿದ್ದರಿಂದ ಮಕ್ಕಳನ್ನು ಕರೆದುಕೊಂಡು ಪತ್ನಿ ಕಮ್ಮನಹಳ್ಳಿಯ ತವರು ಮನೆಗೆ ಹೋಗಿದ್ದರಿಂದ ಉದಯ್‍ಕುಮಾರ್ ಮನೆಯಲ್ಲಿ ರಾತ್ರಿ ಒಬ್ಬರೇ ಇದ್ದರು.

ಆ ಸಂದರ್ಭದಲ್ಲಿ ಇವರ ಮನೆಗೆ ನುಗ್ಗಿದ ದುಷ್ಕರ್ಮಿ ಉದಯ್‍ಕುಮಾರ್‍ನೊಂದಿಗೆ ಜಗಳವಾಡಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಈ ಘಟನೆ ರಾತ್ರಿ 8 ಗಂಟೆಯಿಂದ 10 ಗಂಟೆ ಮಧ್ಯೆ ನಡೆದಿದೆ. ತವರು ಮನೆಗೆ ಹೋಗಿದ್ದ ಪತ್ನಿ ರಾತ್ರಿ ಪತಿಗೆ ಮೊಬೈಲ್ ಕರೆ ಮಾಡಿದ್ದಾರೆ.
ಹಲವಾರು ಕರೆ ಮಾಡಿದರೂ ಸ್ವೀಕರಿಸದಿದ್ದಾಗ ಗಾಬರಿಯಾಗಿ ಮನೆ ಮಾಲೀಕರಿಗೆ ಫೋನ್ ಮಾಡಿ ತನ್ನ ಪತಿ ಬಗ್ಗೆ ವಿಚಾರಿಸಿದ್ದಾರೆ. ಮನೆ ಮಾಲೀಕರು ಕರೆ ಸ್ವೀಕರಿಸಿ ನಿಮ್ಮ ಮನೆಯ ಲೈಟ್ ಉರಿಯುತ್ತಿದೆ. ಕೂಗಿದರೂ ಯಾರೂ ಹೊರ ಬರುತ್ತಿಲ್ಲ ಎಂದು ತಿಳಿಸಿದ್ದಾರೆ.

ಇಷ್ಟಕ್ಕೆ ಸಮಾಧಾನವಾಗದ ಪತ್ನಿ ತನ್ನ ಮೈದುನನಿಗೆ ಫೋನ್ ಮಾಡಿ ಮನೆ ಬಳಿ ಹೋಗಿ ನೋಡುವಂತೆ ತಿಳಿಸಿದ್ದಾರೆ. ಅತ್ತಿಗೆ ಹೇಳಿದಂತೆ ಮೈದುನ ಮನೆ ಬಳಿ ಹೋಗಿ ನೋಡಿದಾಗ ರಕ್ತದ ಮಡುವಿನಲ್ಲಿ ಅಣ್ಣ ಉದಯ್‍ಕುಮಾರ್ ಮೃತಪಟ್ಟಿರುವುದು ಕಂಡು ಬಂದಿದೆ.

ತಕ್ಷಣ ಈ ವಿಷಯವನ್ನು ಅತ್ತಿಗೆಗೆ ತಿಳಿಸಿ ನಂತರ ಮಹದೇವಪುರ ಠಾಣೆ ಪೊಲೀಸರಿಗೆ ಹೇಳಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ನೆರೆಹೊರೆಯವರಿಂದಲೂ ಮಾಹಿತಿ ಪಡೆದುಕೊಂಡಿದ್ದಾರೆ.
ಉದಯ್‍ಕುಮಾರನ ಪತ್ನಿಯನ್ನು ಬೇರೊಬ್ಬ ಇಷ್ಟ ಪಡುತ್ತಿದ್ದ. ಹಾಗಾಗಿ ಉದಯ್‍ಕುಮಾರ್ ಇದ್ದರೆ ತನಗೆ ಅಡ್ಡಿ ಆಗಬಹುದೆಂದು ಯೋಚಿಸಿ ಕೊಲೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಆರೋಪಿ ಸುಳಿವು:
ಕೊಲೆ ಆರೋಪಿ ಬಗ್ಗೆ ಸುಳಿವು ಇದ್ದು ಆದಷ್ಟು ಬೇಗ ಆತನನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ವರದಿ ಆಂಟೋನಿ ಬೇಗೂರು

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ರಾಜ್ಯ ಪೊಲೀಸ್ ಪೊಲೀಸ್ ಮಹಾ ನಿರ್ದೇಶಕ(ಡಿಜಿ-ಐಜಿಪಿ) ರಾಗಿ ಡಾ.ಅಲೋಕ್ ಮೋಹನ್ ಅವರು ಇಂದು ಅಧಿಕಾರ ಸ್ವೀಕಾರ

ರಾಜ್ಯ ಪೊಲೀಸ್ ಪೊಲೀಸ್ ಮಹಾ ನಿರ್ದೇಶಕ(ಡಿಜಿ-ಐಜಿಪಿ) ರಾಗಿ ಡಾ.ಅಲೋಕ್ ಮೋಹನ್ ಅವರು ಇಂದು ಅಧಿಕಾರ ವಹಿಸಿಕೊಂಡರು.ಅಗ್ನಿಶಾಮಕ ದಳ ಮತ್ತು ಗೃಹ ರಕ್ಷಕದಳದ ಮುಖ್ಯಸ್ಥರಾಗಿರುವ ಅಲೋಕ್ ಮೋಹನ್? ಅವರು ಹೆಚ್ಚುವರಿಯಾಗಿ ಡಿಜಿ-ಐಜಿಪಿಯಾಗಿ ಅಧಿಕಾರವನ್ನು ಸಿಬಿಐ ನಿರ್ದೇಶಕರಾಗಿ ಕೇಂದ್ರ ಸೇವೆಗೆ ತೆರಳುತ್ತಿರುವ ಪ್ರವೀಣ್ ಸೂದ್ ಅವರಿಂದ ವಹಿಸಿಕೊಂಡರು.ಸೇವಾ ಹಿರಿತನದ ಆಧಾರದ ಮೇಲೆ ೮೭ನೇ ಬ್ಯಾಚ್‌ನ ಅಧಿಕಾರಿ ಹಾಗೂ ಪ್ರಸ್ತುತ ರಾಜ್ಯ ಅಗ್ನಿಶಾಮಕ ದಳ ಮತ್ತು ಗೃಹ ರಕ್ಷಕದಳದ ಮುಖ್ಯಸ್ಥರಾಗಿರುವ ಅಲೋಕ್ ಮೋಹನ್ ಅವರನ್ನು […]

Get News on Whatsapp

by send "Subscribe" to 7200024452
Close Bitnami banner
Bitnami