ಮಡಿವಾಳ ಪೊಲೀಸ್ ಠಾಣೆ ವತಿಯಿಂದ ಮಾಸಿಕ ಜನಸಂಪರ್ಕ ಸಭೆ ನಡೆಸಲಾಯಿತು

John Prem 9448190523
2 0
Read Time:2 Minute, 44 Second

ಬೆಂಗಳೂರು : ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಸಮನ್ವಯ ಸಾಧಿಸಿ ಜನಸ್ನೇಹಿ ವ್ಯವಸ್ಥೆ ರೂಪಿಸುವ ಉದ್ದೇಶದಿಂದ ಬೆಂಗಳೂರು ನಗರ ಠಾಣೆಗಳಲ್ಲಿ ಮಾಸಿಕ ಸಂಪರ್ಕ ಸಭೆ ನಡೆಸುತ್ತಿದ್ದಾರೆ .ಪ್ರತಿ ತಿಂಗಳ ನಾಲ್ಕನೇ ಶನಿವಾರ ಬೆಳಗ್ಗೆ 11 ರಿಂದ ಮಧ್ಯಾಹ್ನ 1ಗಂಟೆಯವರೆಗೆ ಜನಸಂಪರ್ಕ ಸಭೆ ನಡೆಯುತ್ತದೆ .ಈ ಅವಧಿಯಲ್ಲಿ ಸಾರ್ವಜನಿಕರು ತಮ್ಮ ವ್ಯಾಪ್ತಿಯ ಠಾಣೆ ಇನ್ಸ್ ಪೆಕ್ಟರ್ ಗಳು ಹಾಗೂ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದು .

ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣೆಯಲ್ಲಿ ಇಂದು ಮಾಸಿಕ ಜನಸಂಪರ್ಕ ದಿನವನ್ನು ಆಚರಿಸಲಾಗಿತ್ತು ಮಡಿವಾಳ ಪೊಲೀಸ್ ಠಾಣಾಧಿಕಾರಿ ಶ್ರೀ. ಪೌಲ್ ಪ್ರಿಯಾ ಕುಮಾರ್ ರವರು ,ಸಬ್ ಇನ್ಸ್ ಪೆಕ್ಟರ್ ಶ್ರೀ .ಕುಮಾರ್ ರವರು ,ಸಬ್ ಇನ್ಸ್ ಪೆಕ್ಟರ್ ಶ್ರೀಮತಿ. ಭೀಮಕ್ಕ ರವರು ಹಾಗೂ ಸಿಬ್ಬಂದಿಗಳುಹಾಜರಿದ್ದರು . ಜನಸಂಪರ್ಕ ಸಭೆಯಲ್ಲಿ ಪಾಲ್ಗೊಂಡ ಸಾರ್ವಜನಿಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಕೆಲವು ದೂರುಗಳು ತಕ್ಷಣವೇ ಪರಿಶೀಲಿಸಲಾಯಿತು .ಅಲ್ಲಲ್ಲಿ ಹುಡುಗ ಹುಡುಗಿಯರು ಧೂಮಪಾನ ಮಾಡುತ್ತಿರುವ ಬಗ್ಗೆ ಹಾಗೂ ಅಕ್ರಮ ಕೋಲಿವಿಂಗ್ ಪಿಜಿ ಗಳ ಬಗ್ಗೆ ,ಮುಖ್ಯವಾಗಿ ಮಾರುತಿ ನಗರದಲ್ಲಿರುವ ವೆಂಕಟೇಶ್ವರ ಕಾಲೇಜ್ ಹತ್ತಿರ 100 ಮೀಟರ್ ಒಳಗೆ ಇರುವ ಧೂಮಪಾನ ಅಂಗಡಿಗಳನ್ನು ನಿಷೇಧಿಸಲು ಠಾಣಾಧಿಕಾರಿಗೆ ವಿನಂತಿಸಿದರು .ದೂರುಗಳನ್ನು ಸ್ವೀಕರಿಸಿದ ಸಿಬ್ಬಂದಿಗಳು ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಲಾಯಿತು .

ಈ ಸಭೆಯಲ್ಲಿ ಮಾತನಾಡಿದ ಠಾಣಾಧಿಕಾರಿ ಶ್ರೀ.ಪಾಲ್ ಪ್ರಿಯ ಕುಮಾರ್ ಅವರು ಮನೆಗಳಲ್ಲಿ ಮತ್ತು ಅಂಗಡಿಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆಯ ಬಗ್ಗೆ ಜಾಗೃತಿ ಮೂಡಿಸಿದರು ಮತ್ತು ಊರಿಗೆ ಹೋಗುವ ಸಮಯದಲ್ಲಿ ಮಾಹಿತಿಯನ್ನು ಠಾಣೆಗೆ ನೀಡಿದರೆ ಕಳ್ಳತನ ಪ್ರಕರಣವನ್ನು ತಡೆಯಬಹುದು ಎಂದು ಸಾರ್ವಜನಿಕರಿಗೆ ತಿಳಿಸಿದರು .ನಂತರ ಮಾತನಾಡಿದ ಸಬ್ ಇನ್ಸ್ ಪೆಕ್ಟರ್ ಶ್ರೀಮತಿ. ಭೀಮಕ್ಕ ಅವರು ದ್ವಿಚಕ್ರ ವಾಹನಗಳ ಸುರಕ್ಷತೆ ಮತ್ತು ಪಾರ್ಕಿಂಗ್ ಗಳ ಬಗ್ಗೆ ಜಾಗೃತಿ ಮೂಡಿಸಿದರು .

ದೂರುಗಳನ್ನು ಸ್ವೀಕರಿಸಿದ ಸಿಬ್ಬಂದಿಗಳು ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಲಾಯಿತು .

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಬೆಂಗಳೂರಿನ ಹೆಣ್ಣೂರು ಪೊಲೀಸರ ಕಾರ್ಯಾಚರಣೆ

ಬೆಂಗಳೂರಿನ ಹೆಣ್ಣೂರು ಪೊಲೀಸರ ಕಾರ್ಯಾಚರಣೆ ಚಿನ್ನಾಭರಣ ಕಳುವ ಮಾಡಿದ ತಮಿಳುನಾಡು ಮೂಲದ ಮೂರು ಜನ ಕುಖ್ಯಾತ ಕಳ್ಳರ ಬಂಧನ ಆರೋಪಿಗಳಿಂದ 49 ಲಕ್ಷ ರೂ ಮೌಲ್ಯದ ಚಿನ್ನಾಭರಣ ವನ್ನು ವಶಪಡಿಸಿಕೊಂಡ ಪೊಲೀಸರು ಬೆಂಗಳೂರು ನಗರದ ಹೆಣ್ಣೂರು, ರಾಮಮೂರ್ತಿನಗರ, ಕೊತ್ತನೂರು, ಮತ್ತು ಯಲಹಂಕ ಹಾಗೂ ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆ ಪಿಳಮೇಡು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ರಾತ್ರಿ ಮತ್ತು ಹಗಲು ವೇಳೆಯಲ್ಲಿ ಮನೆಗಳನ್ನು ಲೂಟಿ ಮಾಡಿ ಚಿನ್ನದ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿ […]

Get News on Whatsapp

by send "Subscribe" to 7200024452
Close Bitnami banner
Bitnami