ಅಕ್ರಮ ಗಾಂಜಾ ಸಾಗಾಟ , ಆರೋಪಿತನ ಬಂಧನ, 905 ಗ್ರಾಂ ಗಾಂಜಾ ವಶ

0 0
Read Time:1 Minute, 48 Second

ದಿನಾಂಕ 30-06-2022 ರಂದು ಅಂಕೋಲಾ ತಾಲೂಕಿನ NH 63 ರಸ್ತೆ ಹೊಸಕಂಬಿ ಕ್ರಾಸ್ ಹತ್ತಿರ ಒಬ್ಬ ವ್ಯಕ್ತಿಯು ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಬಗ್ಗೆ ಡಾ || ಸುಮನ ಪೇನ್ನೇಕರ ಮಾನ್ಯ ಪೊಲೀಸ್ ಅಧೀಕ್ಷಕರು ಕಾರವಾರ ರವರಿಗೆ ಮಾಹಿತಿ ಬಂದ ಮೇರೆಗೆ ಮಾನ್ಯ ಎಸ್.ಪಿ. ಕಾರವಾರ ಹಾಗೂ ಶ್ರೀ ಎಸ್ ಬದರಿನಾಥ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು , ಕಾರವಾರ ರವರ ಮಾರ್ಗದರ್ಶನದಲ್ಲಿ ಜಿಲ್ಲಾ ವಿಶೇಷ ವಿಭಾಗದ ಶ್ರೀ ಪ್ರೇಮನಗೌಡ ಪಾಟೀಲ್ ಪಿ.ಎಸ್.ಐ. ಎಚ್.ಸಿ- ರಾಘವೇಂದ್ರ ಜಿ, ಪಿ.ಸಿ. ಭಗವಾನ ಗಾಂವಕರ , ವೀರೇಶ್ ನಾಯ್ಕ್ ತಂಡವು ಹೊಸಕಂಬಿ ಕ್ರಾಸ್ ಹತ್ತಿರ ಅನುಮಾನಾಸ್ಪದವಾಗಿ ನಿಂತಿದ್ದ ವ್ಯಕ್ತಿಯನ್ನು ದಸ್ತಗಿರ ಮಾಡಿದ್ದಲ್ಲಿ ವಾಡಗರ ಅಚುವೇ ಗ್ರಾಮದ ವಿಷ್ಣು ದೇವಾಗ್ಯ ಮರಾಠಿ ಪ್ರಾಯ 34,ಈತನು ಯಾವುದೇ ಪಾಸ ಅಥವಾ ಪರ್ಮಿಷನ್ ಇಲ್ಲದೆ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಸುಮಾರು 55,000 ರೂಪಾಯಿ ಮೌಲ್ಯದ 905 ಗ್ರಾಂ ಗಾಂಜಾ ದೊರೆತಿದ್ದು ಸ್ವತ್ತುಗಳನ್ನು ವಶಪಡಿಸಿಕೊಂಡು ಆರೋಪಿತನಿಗೆ ದಸ್ತಗಿರಿ ಮಾಡಿ ಮುಂದಿನ ಕ್ರಮಕ್ಕಾಗಿ ಅಂಕೋಲಾ ಪೊಲೀಸ್ ರಾಣೆಯವರ ತಾಬಾಕ್ಕೆ ಆರೋಪಿ ಹಾಗೂ ಸ್ವತ್ತುಗಳೊಂದಿಗೆ ನೀಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಮಾನ್ಯ ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಕಾರವಾರ ರವರು ಶ್ಲಾಘನೆ ವ್ಯಕ್ತಪಡಿಸಿರುತ್ತೇನೆ

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ತಿಲಕ್ ನಗರ ಪೊಲೀಸ್ ವತಿಯಿಂದ ಸಾರ್ವಜನಿಕರ ಕುಂದುಕೊರತೆ ಮತ್ತು ಶಾಂತಿ ಸಭೆ

ದಿನಾಂಕ 05.07.2022 ರಂದು ಸಂಜೆ 05.00 ಗಂಟೆಗೆ ಬೆಂಗಳೂರು ನಗರ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರ ಕುಂದುಕೊರತೆ ಮತ್ತು ಬಕ್ರೀದ್ ಹಬ್ಬದ ಪ್ರಯುಕ್ತ ಶಾಂತಿ ಸಭೆಗಳನ್ನು ನಡೆಸಲಾಯಿತು. ಸಭೆಯಲ್ಲಿ ಎಲ್ಲಾ ಧರ್ಮದ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿರುತ್ತಾರೆ ಹಾಗೂ ತಮ್ಮ ಕುಂದುಕೊರತೆಗಳ ಬಗ್ಗೆ ತಿಳಿಸಿರುತ್ತಾರೆ.ಸದರಿ ಸಮಯದಲ್ಲಿ ಕಾನೂನು ಅರಿವು ಹಾಗೂ ಬಕ್ರೀದ್ ಹಬ್ಬದ ಸೂಚನೆಗಳ ಬಗ್ಗೆ ಜಾಗೃತಿ ಮೂಡಿಸಿ, ಅಪರಾಧ ತಡೆಗಟ್ಟಲು ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ತಿಳಿಸಲಾಯಿತು. […]

Get News on Whatsapp

by send "Subscribe" to 7200024452
Close Bitnami banner
Bitnami