ತಿರುಮಲಶೆಟ್ಟಹಳ್ಳಿ‌ ಪೊಲೀಸರ ಕಾರ್ಯಾಚರಣೆ ಇಬ್ಬರು ಕಳ್ಳರ ಬಂಧನ

2 0
Read Time:1 Minute, 51 Second

ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕು ತಿರುಮಲಶೆಟ್ಟಹಳ್ಳಿಯ ಪೊಲೀಸರು ಇಬ್ಬರು ಕಳ್ಳರನ್ನು ಬಂಧಿಸಿ ಅವರಿಂದ ಮೂರು ಬೈಕ್,ಎಂಟು ಮೊಬೈಲ್ ಪೋನ್ ಹಾಗೂ ಚಾರ್ಜರ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರು ಕೋಲಾರ ಜಿಲ್ಲೆ ಮಾಲೂರು ತಾಲೂಕು ತೋರ್ನಹಳ್ಳಿ ಗ್ರಾಮದ ಗಣೇಶ್ ( 20) ಹಾಗೂ ಬೆಂಗಳೂರು ಕಾಮಾಕ್ಷಿಪಾಳ್ಯ ಶ್ರೀಕಾಂತ ( 19) ಎಂದು ಪೊಲೀಸರು ತಿಳಿಸಿದ್ದಾರೆ.


ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನವಂಶಿಕೃಷ್ಣ,ಅಪರ ಪೊಲೀಸ್ ಅದೀಕ್ಷರಾದ ಲಕ್ಷ್ಮಿ ಗಣೇಶ್,ಡಿವೈಎಸ್ಪಿ ಉಮಾಶಂಕರ್ ಮಾರ್ಗ ದರ್ಶನದಂತೆ ತಿರುಮಲಶೆಟ್ಟಿಹಳ್ಳಿ ಸಿಪಿಐ ಕಲ್ಲಪ್ಪ ಖರಾತ್, ಸಬ್ ಇನ್ಸ್ಪೆಕ್ಟರ್ ಪ್ರದೀಪ್ ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳಾದ ಶಿವರಾಜ್,ಲಕ್ಷ್ಮಿಕಾಂತ್ ಸಂಜೆ ಗಸ್ತು ಮಾಡುವ ಸಮಯದಲ್ಲಿ ಸೌಖ್ಯ ರಸ್ತೆಯ ಪೆಟ್ರೋಲ್ ಬಂಕ್ ಪಕ್ಕದ ನೀಲಗಿರಿ ತೋಪಿನ ಬಳಿ ಇಬ್ಬರು
ಅನುಮಾನಸ್ಪದವಾಗಿ ಬೈಕಿನಲ್ಲಿ ಕುಳಿತಿರುವುದನ್ನು ಗಮನಿಸಿದ ಅಪರಾಧ ವಿಭಾಗದ ಪೊಲೀಸರು ಅವರನ್ನು ಕರೆದು ವಿಚಾರಣೆ ಮಾಡಲು ಮುಂದಾಗುತ್ತಿದ್ದಂತೆ ಪೊಲೀಸ್ ಜೀಪ್ ಕಂಡು ಇಬ್ಬರು ಪರಾರಿಯಾಗಲು ಪ್ರಯತ್ನಿಸಿದ್ದಾರೆ.ತಕ್ಷಣ ಅವರನ್ನು ಬೆನ್ನಟ್ಟಿ ಹಿಡಿದು ವಿಚಾರಣೆ ಮಾಡಿದಾಗ ಬೈಕ್ ಕಳ್ಳತನ ಮಾಡಿಕೊಂಡು ಬಂದಿರುವ ವಿಷಯವನ್ನು ಬಾಯಿಬಿಟ್ಟಿದ್ದಾರೆ.
ವಿವಿಧಡೆ ಕದ್ದ ವಸ್ತುಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ

Happy
Happy
100 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಅಕ್ರಮ ಗಾಂಜಾ ಸಾಗಾಟ , ಆರೋಪಿತನ ಬಂಧನ, 905 ಗ್ರಾಂ ಗಾಂಜಾ ವಶ

ದಿನಾಂಕ 30-06-2022 ರಂದು ಅಂಕೋಲಾ ತಾಲೂಕಿನ NH 63 ರಸ್ತೆ ಹೊಸಕಂಬಿ ಕ್ರಾಸ್ ಹತ್ತಿರ ಒಬ್ಬ ವ್ಯಕ್ತಿಯು ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಬಗ್ಗೆ ಡಾ || ಸುಮನ ಪೇನ್ನೇಕರ ಮಾನ್ಯ ಪೊಲೀಸ್ ಅಧೀಕ್ಷಕರು ಕಾರವಾರ ರವರಿಗೆ ಮಾಹಿತಿ ಬಂದ ಮೇರೆಗೆ ಮಾನ್ಯ ಎಸ್.ಪಿ. ಕಾರವಾರ ಹಾಗೂ ಶ್ರೀ ಎಸ್ ಬದರಿನಾಥ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು , ಕಾರವಾರ ರವರ ಮಾರ್ಗದರ್ಶನದಲ್ಲಿ ಜಿಲ್ಲಾ ವಿಶೇಷ ವಿಭಾಗದ ಶ್ರೀ ಪ್ರೇಮನಗೌಡ […]

Get News on Whatsapp

by send "Subscribe" to 7200024452
Close Bitnami banner
Bitnami