ಉತ್ತರಕನ್ನಡ ಜಿಲ್ಲೆಯ ಪೊಲೀಸರ ಮಕ್ಕಳಿಗೆ ಆಯೋಜಿಸಿದ್ದ “ಮಕ್ಕಳ ವಿಶ್ವ”(Kids World)ಎಂಬ ವಿಶೇಷ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ಜಿಲ್ಲಾ ಪೊಲೀಸ್ ಕಲ್ಯಾಣ ಮಂಟಪದಲ್ಲಿ ನೆರವೇರಿಸಲಾಯಿತು.

0 0
Read Time:1 Minute, 46 Second

ಬೇಸಿಗೆ ಶಿಬಿರವನ್ನು ದಿನಾಂಕ:05-05-2022 ರಿಂದ ದಿನಾಂಕ 15-05-2022 ರವರೆಗೆ ಒಟ್ಟು 10 ದಿನಗಳ ಕಾಲ ಬೇಸಿಗೆ ಶಿಬಿರವನ್ನು ಶಿಕ್ಷಕರಾದ ರಾಜೇಶ್ವರಿ, ವಂದನಾ,ಸ್ಮಿತೇಶ್ ಹಾಗೂ ಸಮಾಲೋಚಕರಾದ ರಂಜಿತ್ ಜಿ ಟಿ ರವರು ನಡೆಸಿಕೊಟ್ಟರು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾನ್ಯ ಪೊಲೀಸ್ ವರಿಷ್ಟಾಧಿಕಾರಿಗಳಾದ ಶ್ರೀಮತಿ ಸುಮನ್ ಡಿ ಪೆನ್ನೇಕರ್ ಹಾಗೂ ಹೆಚ್ಚುವರಿ ಎಸ್. ಪಿ. ಬದ್ರಿನಾಥ್ ರವರು ಆಗಮಿಸಿದ್ದರು, ಕಾರ್ಯಕ್ರಮದಲ್ಲಿ ಮಕ್ಕಳು ತಯಾರಿಸಿದ ಕರಕುಶಲ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಶಿಬಿರದಲ್ಲಿ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಮತ್ತು ಬೆಳೆಸಲು ಸಹಕಾರಿಯಾಗುವಂತ ಚಿತ್ರಕಲೆ, ಟ್ರೇಜರಹಂಟ್, ಸ್ಟೋನ್ ಪೇಂಟಿಂಗ್, ವಾಟರ್ ಗ್ಲಾಸ್ ಕ್ರಾಫ್ಟ್ಸ್ ಮುಂತಾದ ಚಟುವಟಿಕೆಗಳನ್ನು ಶಿಬಿರದಲ್ಲಿ ಪೊಲೀಸರ ಮಕ್ಕಳಿಂದ ನಿರ್ವಹಿಸಲಾಗಿದೆ.ನೃತ್ಯ,ನಾಟಕ, ಗಾಯನ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಶಿಬಿರದಲ್ಲಿ ಮಕ್ಕಳಲ್ಲಿ ಆತ್ಮವಿಶ್ವಾಸ,ಧೈರ್ಯ ಹೆಚ್ಚಾದ ಬಗ್ಗೆ ಮಕ್ಕಳು ಅನಿಸಿಕೆ ಹಂಚಿಕೊಂಡರು. ನಂತರ ಶಿಬಿರದಲ್ಲಿ ಉತ್ತಮ ಚಟುವಟಿಕೆ ನಿರ್ವಹಿಸಿದ ಮಕ್ಕಳಿಗೆ ಬಹುಮಾನ ನೀಡಿ ಪುರಸ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಕಾರವಾರ ಉಪವಿಭಾಗದ ಪೊಲೀಸ್ ಉಪಾದಿಕ್ಷಕರಾದ ವೇಲೆಂಟೇಯನ್ಸ್ ಡಿಸೋಜಾ ಹಾಗೂ ಪೊಲೀಸ್ ಅಧಿಕಾರಿ/ಸಿಬ್ಬಂದಿ ವರ್ಗದವರು ಹಾಜರಿದ್ದರು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಪಡಿತರ ಅಕ್ಕಿ ಲಾರಿ ಅಪಹರಣಕಾರನ ಬಂಧನ ಧಾರವಾಡ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ

ಲಘಟಗಿ ಪಟ್ಟಣದ ಹಳಿಹಾಳ ರಸ್ತೆಯ ಯುವಶಕ್ತಿ ಸರ್ಕಲ್ ಬಳಿಯಲ್ಲಿ ದಿನಾಂಕ. 11-05-2022 ರಂದು ನಿಂತಿದ್ದ ಹುಬ್ಬಳ್ಳಿ ಎಫ್.ಸಿ.ಐ ಗುದಾಮಿನಿಂದ ದಾಂಡೇಲಿಗೆ ಹೋಗುತ್ತಿದ್ದ 260 ಚೀಲ ಅಕ್ಕಿ ತುಂಬಿದ ಲಾರಿಯನ್ನು ಅಪಹರಿಸಿಕೊಂಡು ಹೋದ ಪ್ರಕರಣಕ್ಕೆ ಸಂಬಂಧಿಸದಿಂತೆ ಲಾರಿ ಸಮೇತ ಆರೋಪಿಯನ್ನು ಕಲಘಟಗಿ ಪೊಲೀಸ್ರು ಬಂದಿಸಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಶ್ರೀ.ಶೈಲ ಕೌಜಲಗಿ ರವರು ಹಿರಿಯ ಅಧಿಕಾರಿಯವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಕೈಗೊಂಡು ತಾಲೂಕಿ ಅರೆಬಸನಕೊಪ್ಪ ಗ್ರಾಮದ ಹತ್ತಿರ ಕಳ್ಳತನವಾದ […]

Get News on Whatsapp

by send "Subscribe" to 7200024452
Close Bitnami banner
Bitnami