ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ 3 ವ್ಯಕ್ತಿಗಳ ಬಂಧನ, 05 ಕೆ.ಜಿ 800 ಗ್ರಾಂ ಗಾಂಜಾ ವಶ

0 0
Read Time:2 Minute, 41 Second


ದಿನಾಂಕ: 30.08.2023 ರಂದು ಸಂಜೆ ಸಮಯದಲ್ಲಿ ವಿದ್ಯಾನಗರ ಠಾಣಾ ಸರಹದ್ದಿನ ಆಂಜನೇಯ ಬಡಾವಣೆ 12ನೇ ಕ್ರಾಸ್ ನಲ್ಲಿರುವ ಮನೆಯೊಂದರ ಮೇಲ್ಬಾಗದ ರೂಂನಲ್ಲಿ ಗಾಂಜಾ ಸೇವನೆ ಮತ್ತು ಮಾರಾಟ ಮಾಡುವ ಸಲುವಾಗಿ ಅಕ್ರಮವಾಗಿ ಗಾಂಜಾ ಸೋಪ್ಪನ್ನು ಸಂಗ್ರಹಮಾಡಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಆರ್.ಬಿ ಬಸರಗಿ ರವರು ಹಾಗೂ ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್‌ಪಿ ಶ್ರೀ ಮಲ್ಲೇಶ್ ದೊಡ್ಡಮನಿ ರವರ ಮಾರ್ಗದರ್ಶನದಲ್ಲಿ ದಾವಣಗೆರೆ ನಗರದ ವಿದ್ಯಾನಗರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಆಂಜನೇಯ ಬಡಾವಣೆ 12ನೇ ಕ್ರಾಸ್ ನಲ್ಲಿನ ಮನೆಯ ಮೇಲ್ಬಾಗದ ರೂಂನಲ್ಲಿದ್ದ ಆರೋಪಿತರ ಮೇಲೆ ದಾಳಿಮಾಡಿ, ಆರೋಪಿತರಾದ

1) ಶಿವಾಸ್ ಎಸ್, 26 ವರ್ಷ, 2) ಮನೋಜ್ ಜಿ.ಯು 26 ವರ್ಷ, 3) ವಿಶ್ವನಾಥ್ ಪೂಜಾರ್, 26 ವರ್ಷ ಎಲ್ಲಾ ಆರೋಪಿತರುಗಳು ದಾವಣಗೆರೆ ನಗರದ ವಾಸಿಗಳು ಇವರುಗಳನ್ನು ದಸ್ತಗಿರಿ ಮಾಡಿದ್ದು ಆರೋಪಿತರಿಂದ ಸುಮಾರು 1,50,000/- ರೂ ಮೌಲ್ಯದ 5ಕೆ.ಜಿ.800 ಗ್ರಾಂ ಗಾಂಜಾ ಸೋಪ್ಪನ್ನು ಹಾಗೂ 600 ನಗದು ಹಣ, ಗಾಂಜಾ ಸೇವನೆಗೆ ಬಳಸಿದ್ದ 02 ಚೀಲುಮೆಗಳನ್ನು ವಶಪಡಿಸಿಕೊಂಡಿದ್ದು, ಈ ಸಂಬಂದ ವಿದ್ಯಾನಗರ ಪೊಲೀಸ್ ಠಾಣೆ ಗುನ್ನೆ ನಂ-209/2023 ಕಲಂ-20 (ಬಿ)(A) 25, 8(ಸಿ) 27 (ಬಿ)NDPS Act 1985 ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

ಈ ಮೇಲ್ಕಂಡ ಪ್ರಕರಣದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಗಾಂಜಾ ಸೊಪ್ಪನ್ನು ವಶಪಡಿಸಿಕೊಳ್ಳುವಲ್ಲಿ ಹಾಗೂ ಆರೋಪಿತರನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾದ ಅಧಿಕಾರಿ ಸಿಬ್ಬಂದಿಗಳಾದ ವಿದ್ಯಾನಗರ ಪೊಲೀಸ್ ಠಾಣೆಯ ತನಿಖಾಧಿಕಾರಿ ಶ್ರೀಮತಿ ಪ್ರಭಾವತಿ ಸಿ. ಶೇತಸನದಿ ಪೊಲೀಸ್ ಇನ್ಸ್ಪೆಕ್ಟರ್ ವಿದ್ಯಾನಗರ ಠಾಣೆ, ಶ್ರೀಮತಿ ರೇಣುಕಾ ಜಿ.ಎಂ ಪಿ.ಎಸ್.ಐ ಶ್ರೀ ವಿಜಯ ಪಿ.ಎಸ್.ಐ ಹಾಗೂ ಸಿಬ್ಬಂದಿಗಳಾದ ಲಕ್ಷ್ಮಣ್.ಆರ್. ನಾಗರಾಜ ಕೂಲೇರ, ಮಂಜುನಾಥ.ಬಿ.ವಿ.ಲೋಹಿತ ಎಸ್. ಗಿರಿಧರ.ಎಲ್. ಬುಡೇನ್‌ಲಿ, ಗೋಪಿನಾಥ ಬಿ ನಾಯ್ಕ, ಅಜ್ಜಯ್ಯ ಎ.ಆರ್.ಎಸ್.ಐ ರವರುಗಳನ್ನು ಮಾನ್ಯ ಪೊಲೀಸ್ ಅಧೀಕ್ಷಕರವರಾದ ಶ್ರೀಮತಿ ಉಮಾ ಪ್ರಶಾಂತ್ ಐ.ಪಿ.ಎಸ್ ರವರು ಶ್ಲಾಘಿಸಿರುತ್ತಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

03 ಜನ ಶ್ರೀಗಂಧ ಮರಗಳ್ಳರ ಬಂಧನ, 6.50 ಲಕ್ಷ ಮೌಲ್ಯದ ಶ್ರೀಗಂಧ ವಶ

ಚನ್ನಗಿರಿ ಉಪವಿಭಾಗ ಠಾಣಾ ಸರಹದ್ದುಗಳಲ್ಲಿ ಶ್ರೀ ಗಂಧ ಮರ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು ಈ ಪ್ರಕರಣಗಳನ್ನು ಪತ್ತೆ ಮಾಡಲು ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ರಾಮಗೊಂಡ ಬಿ ಬಸರಗಿ ಹಾಗೂ ಮಾನ್ಯ ಪೊಲೀಸ್‌ ಉಪಾಧೀಕ್ಷರು ಚನ್ನಗಿರಿ ರವರಾದ ಡಾ. ಸಂತೋಷ ಕೆ.ಎಂ, ದಾವಣಗೆರೆ ಗ್ರಾಮಾಂತರ ಉಪವಿಭಾಗದ ಉಪಾಧೀಕ್ಷಕರಾದ ಶ್ರೀ ಬಸವರಾಜ ಬಿ.ಎಸ್ ರವರ ಮಾರ್ಗದರ್ಶನದಲ್ಲಿ ಸಿಪಿಐ ಸಂತೇಬೆನ್ನೂರು ವೃತ್ತ ಶ್ರೀ ಲಿಂಗನಗೌಡ ನೆಗಳೂರು ರವರ ನೇತೃತ್ವದಲ್ಲಿ ಪಿ.ಎಸ್.ಐ ಸಂತೇಬೆನ್ನೂರು ಶ್ರೀಮತಿ ರೂಪಾ […]

Get News on Whatsapp

by send "Subscribe" to 7200024452
Close Bitnami banner
Bitnami