ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರ ಭರ್ಜರಿ ಬೇಟೆ: ಇಬ್ಬರ ಬಂಧನ ಕಳವು ಮಾಡಿದ್ದ 13 ದ್ವಿಚಕ್ರ ವಾಹನಗಳ ವಶ

1 0
Read Time:1 Minute, 58 Second

ದೊಡ್ಡಬಳ್ಳಾಪುರ (ಆಗಸ್ಟ್ 29): ಕಳವು ಮಾಡಲಾದ ದ್ವಿಚಕ್ರವಾಹನಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ವಶ ಪಡೆಯುವ ಮೂಲಕ ಗ್ರಾಮಾಂತರ ಠಾಣೆ ಪೋಲಿಸರು ಭರ್ಜರಿ ಬೇಟೆಯನ್ನೇ ಆಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬಾಂಬೆರೆಯಾನ್ ಕಾರ್ಖಾನೆ ಬಳಿ ನಂಬರ್ ಪ್ಲೇಟ್ ಇಲ್ಲದ ಡಿಯೋ ಬೈಕ್ ಅನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಬೆಂಗಳೂರಿನ ಕೋಡಿಗೆಹಳ್ಳಿ ಸಮೀಪದ ಅಮೃತಳ್ಳಿ ನಿವಾಸಿ ಚೇತನ್ (19 ವರ್ಷ) ವಶಕ್ಕೆ ಪಡೆದಿದ್ದು, ಈತನ ವಿಚಾರದ ನಂತರ ಅಮೃತಳ್ಳಿ ಹೂಡಿ ಲೇಔಟ್ ನಿವಾಸಿ ಸಾಯಿ ಪವನ್ (18 ವರ್ಷ) ಎಂದು ಅವರನ್ನು ಪತ್ತೆ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ.
ಈ ವೇಳೆ ಬಂದಿತರು ಶರಣ್ ಎಂಬುವವರ ಜೊತೆಗೂಡಿ, ಬೆಂಗಳೂರು,ದೇವನಹಳ್ಳಿ ,ಯಲಹಂಕ, ಕೊತ್ತನೂರು, ದೊಡ್ಡಬಳ್ಳಾಪುರ ನಗರ, ಕಾರಹಳ್ಳಿ,ಹೆಗ್ಗಡೆ ನಗರ ಮತ್ತಿತರ ಕಡೆ ಕಳ್ಳತನ ಮಾಡಿ ಸುಮಾರು 12 ಲಕ್ಷ 50 ಸಾವಿರ ಮೌಲ್ಯದ 13 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಕಾರ್ಯಚರಣೆಯನ್ನು ಪೊಲೀಸ್ ಅಧೀಕ್ಷಕರಾದ ಮಲ್ಲಿಕಾರ್ಜುನ ಬಾಲದಂಡಿ ಅಪರ ಪೊಲೀಸ್ ಅಧೀಕ್ಷಕ ಪುರುಷೋತ್ತಮ್ ಡಿವೈಎಸ್ಪಿ ರವಿ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಡಿ. ಹೆಚ್.ಮುನಿಕೃಷ್ಣ ಅವರ ನೇತೃತ್ವದಲ್ಲಿ ಪಿಎಸ್ಐ ಪಂಕಜ ಸಿಬ್ಬಂದಿಗಳಾದ ವೆಂಕಟೇಶ್ ಕುಮಾರ್, ಅರ್ಜುನ್ ಲಮಾಣಿ, ಮಂಜುನಾಥ್, ಹನುಮಂತರರಾಜು,ಗಂಗಯ್ಯ ಸಚಿನ ಉಪ್ಪಾರ ತಂಡ ಆರೋಪಿಗಳನ್ನು ಪತ್ತೆ ಹಚ್ಚಿ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

Happy
Happy
100 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಡಾ. ಅಲೋಕ್ ಮೋಹನ್, DG&IGP ಸೇವಾ ಪರೇಡ್ 29-08-2023 ರಂದು ನಡೆಯಿತು

ದಿನಾಂಕ 29-08-2023 ರಂದು ಬೆಳಿಗ್ಗೆ 8:00 ಗಂಟೆಗೆ ಡಾ. ಅಲೋಕ್ ಮೋಹನ್, ಡಿಜಿ ಮತ್ತುಐಜಿಪಿ ಕರ್ನಾಟಕ ರಾಜ್ಯ, ಬೆಂಗಳೂರು ರವರಿಗೆ ಸೇವಾ ಕವಾಯಿತು ಏರ್ಪಡಿಸಲಾಗಿತ್ತು. ಈ ಸೇವಾಕವಾಯಿತಿನಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡುತ್ತಾ, ಪೊಲೀಸ್ ಇಲಾಖೆಗೆ UNITY, TEAMSPRIT ಮತ್ತು DISCIPLINE ಮೂಲ ಬುನಾದಿಯಾಗಿದೆ ಮತ್ತು ಸೇವಾ ಪರೇಡ್‌ನಲ್ಲಿ ಪೊಲೀಸ್ಕಾನ್ಸ್ಟೇಬಲ್‌ನಿಂದ ರಾಜ್ಯದ ಡಿ.ಜಿ.ಪಿ. ವರೆಗೆ ಇಲಾಖೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳುಒಂದೇ ಸ್ಥಳದಲ್ಲಿ ಸೇರಿರುವ ಈ ಸಂದರ್ಭವು UNITY, TEAMSPRIT […]

Get News on Whatsapp

by send "Subscribe" to 7200024452
Close Bitnami banner
Bitnami