ಬಂಟ್ವಾಳ ನಗರ ಠಾಣಾ ಪೊಲೀಸರಿಂದ ಬೈಕ್‌ ಕಳ್ಳತನದ ಆರೋಪಿಗಳ ಬಂಧನ.

0 0
Read Time:1 Minute, 48 Second

ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 27.04.2022 ರಂದು ರಾತ್ರಿ ಬಂಟ್ವಾಳ ಮಣಿಹಳ್ಳ ಎಂಬಲ್ಲಿ ನಡೆದ ಸುಮಾರು 1 ಲಕ್ಷ ಮೌಲ್ಯದ ಮೋಟಾರ್ ಸೈಕಲ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ

1) ಸಿದ್ದಿಕ್ @ ಅಬೂಬ್ಬಕ್ಕರ್ ಸಿದ್ದಿಕ್, ಪ್ರಾಯ 27 ವರ್ಷ ತಂದೆ: ಹಮೀದ್, ವಾಸ : ಸಬರಬೈಲು ಮನೆ, ಕುವೆಟ್ಟು ಗ್ರಾಮ, ಬೆಳ್ತಂಗಡಿ ತಾಲೂಕು.

2) ಅಕ್ಬರ್, ಪ್ರಾಯ 32 ವರ್ಷ, ತಂದೆ: ಯೂಸುಫ್, ವಾಸ: ನೆಹರುನಗರ ಮನೆ, ನರಿಕೊಂಬು ಗ್ರಾಮ, ಬಂಟ್ವಾಳ ತಾಲೂಕು ಹಾಗೂ

3) ಸಮೀರ್ @ ಮೊಹಮ್ಮದ್ ಸಮೀರ್, ಪ್ರಾಯ 23 ವರ್ಷ, ತಂದೆ: ಶರೀಫ್ ಮಹಮ್ಮದ್ ಬಾವ, ಉರ್ಕೆದಬೈಲು ಮನೆ, ಮಾಲಾಡಿ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರನ್ನು ದಸ್ತಗಿರಿ ಮಾಡಿ ಕೂಲಂಕುಷವಾಗಿ ತನಿಖೆ ನಡೆಸಿದಾಗ ಸದರಿ ಆರೋಪಿಗಳು ದಿನಾಂಕ: 23.04.2022 ರಂದು ಮಧ್ಯರಾತ್ರಿ ಬಂಟ್ವಾಳ ರೈಲ್ವೇ ಸ್ಟೇಷನ್ ಬಳಿ ಇನ್ನೊಂದು ಮೋಟಾರ್ ಸೈಕಲನ್ನು ಕಳವುಗೈದಿರುವುದು ತಿಳಿದುಬಂದಿರುತ್ತದೆ. ಆರೋಪಿಗಳಿಂದ ಕಳವು ಮಾಡಲಾದ 2 ಮೋಟಾರ್ ಸೈಕಲ್‌ಗಳು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಸದ್ರಿ ಪತ್ತೆ ಕಾರ್ಯದಲ್ಲಿ ಮಾನ್ಯ ಪೊಲೀಸ್ ಅಧೀಕ್ಷಕರು ದ.ಕ. ಜಿಲ್ಲೆ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ದ.ಕ. ಜಿಲ್ಲೆ ಮಂಗಳೂರು ರವರ ಮಾರ್ಗದರ್ಶನದಂತೆ, ವಿಶೇಷ ತಂಡ ಪತ್ತೆ ಕಾರ್ಯದಲ್ಲಿ ಭಾಗವಹಿಸಿರುತ್ತಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಗ್ರಾಮೀಣ ಪೊಲೀಸರ ಕಾರ್ಯಾಚರಣೆ

ಅಡಿಕೆ ಕಳ್ಳನ ಬಂಧನ. ಸುಮಾರು 12 ಕ್ವಿಂಟಲ್ ಚಾಲಿ ಅಡಿಕೆಯ ಜಪ್ತು, ಕೃತ್ಯಕ್ಕೆ ಉಪಯೋಗಿಸಿದ ಪ್ಯಾಸೆಂಜರ್ ಆಟೋ ರಿಕ್ಷಾ ವಶಕ್ಕೆ.. ದಿನಾಂಕ 23.5. 2022 ರಂದು ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯ ಹುಲೇಕಲ್ ಗ್ರಾಮದಲ್ಲಿ ಯಾರೋ ಕಳ್ಳರು ಪಿರ್ಯಾದಿ ಮಂಜುನಾಥ ತಂದೆ ಬಸಪ್ಪ ಗೌಡರ್ ಪ್ರಾಯ 59 ವರ್ಷ ಕೃಷಿ ಕೆಲಸ ಕೊಟ್ಟಿಗೆಮನೆ, ಗ್ರಾಮ ಹುಲೇಕಲ್ ವಾಸಿಯ ವಾಸದ ಮನೆಯ ಪಕ್ಕದ ಕೊಟ್ಟಿಗೆ ಮನೆಯಲ್ಲಿ ಸಂಗ್ರಹಿಸಿಟ್ಟ ಸುಮಾರು 12 ಕ್ವಿಂಟಲ್ […]

Get News on Whatsapp

by send "Subscribe" to 7200024452
Close Bitnami banner
Bitnami