ಕಾರವಾರ ಜಿಲ್ಲಾ ಪೊಲೀಸರಿಂದ ಗಣರಾಜ್ಯೋತ್ಸವ ಸಂಭ್ರಮ

John Prem 9448190523
3 0
Read Time:2 Minute, 5 Second

ಪ್ರತಿ ವರ್ಷದಂತೆ ಈ ವರ್ಷವು ಕೂಡಾ ರಾಷ್ಟ್ರದ 73 ನೇ ಪ್ರಜಾ ರಾಜ್ಯೋತ್ಸವವು ಕಾರವಾರದ ಜಿಲ್ಲಾ ಪೋಲೀಸ್ ಕವಾಯತು ಮೈದಾನದಲ್ಲಿ ಕರೋನಾ ವೈರಸ್ ವ್ಯಾಧಿಯ ವ್ಯಾಪಕತೆ ಇದ್ದರೂ ಸಹ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಕಲ್ಯಾಣ ಇಲಾಖೆಯ ಸಚಿವ ರಾದ ಶ್ರೀ ಕೋಟಾ ಶ್ರೀನಿವಾಸ ಪೂಜಾರಿ ಯವರು ಧ್ವಜಾರೋಹಣವನ್ನು ನೆರವೇರಿಸಿ ಪೊಲೀಸ್ ಕವಾಯತನ ಪರಿವೀಕ್ಷಣೆಮಾಡಿ ಪ್ರಜಾ ರಾಜ್ಯೋತ್ಸವದ ಶುಭ ಸಂದೇಶವನ್ನು ಹಾಗೂ ಜಿಲ್ಲೆಯ ವಿಶೇಷತೆಗಳ ಬಗ್ಗೆ ಕೊಂಡಾಡಿ ಮತ್ತು ಜಿಲ್ಲೆಯ ಅಭಿವೃದ್ಧಿ ಬಗ್ಗೆ ವಿಶೇಷ ಗಮನಹರಿಸುವುದಾಗಿ ತಿಳಿಸಿರುತ್ತಾರೆ.

ಈ ಬಾರಿಯ ಕಾರವಾರ ಜಿಲ್ಲಾ ಪೋಲೀಸ್ ಕವಾಯತು ಮೈದಾನದಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಜರುಗಿದ ಕನ್ನಡ ಭಾಷೆಯ ಕವಾಯತು ಆದೇಶದ ಮೂಲಕ ಪ್ರಜಾ ರಾಜ್ಯೋತ್ಸವದ ಪೊಲೀಸ ಕವಾಯತು ವಿಶೇಷವಾಗಿರುತ್ತದೆ

. ಈ ಕವಾಯತಿನಲ್ಲಿ ಜಿಲ್ಲೆ ಸಶಸ್ತ್ರ ಪೋಲಿಸ್ ಹಾಗೂ ನಾಗರೀಕ ಪೊಲೀಸ್ ತಂಡಗಳು, ಆರಣ್ಯರಕ್ಷಕರ ತಂಡ, ಗೃಹ ರಕ್ಷಕ ತಂಡ ಮತ್ತು ಶಾಲಾ ವಿದ್ಯಾರ್ಥಿಗಳ ಎನ್. ಸಿ. ಸಿ. ತಂಡಗಳು ಭಾಗವಹಿಸಿದ ಪಥಸಂಚಲನವು ಆಕರ್ಷಕವಾಗಿ ಮೂಡಿ ಬಂದಿರುತ್ತದೆ. ಈ ಸಮಯದಲ್ಲಿ ವಿವಿಧ ಕ್ಷೇತ್ರದಲ್ಲಿ ಉತ್ತಮ ಕೊಡುಗೆ ಜಿಲ್ಲೆಯ ಸಾಧಕರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿ ವರ್ಗದವರು ಮತ್ತು ಕಾರವಾರ ನಗರದ ಗಣ್ಯರು ಪಾಲ್ಗೊಂಡಿರುತ್ತಾರೆ.

Happy
Happy
100 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಮಂಡ್ಯ ಜಿಲ್ಲಾ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ

ಮಂಡ್ಯ ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ ಮೊ.ಸಂ.26/22 ಕಲಂ 379 ಐಪಿಸಿ ಪ್ರಕರಣದಲ್ಲಿ 5 ಜನ ಕುಖ್ಯಾತ ದ್ವಿಚಕ್ರ ವಾಹನ ಕಳ್ಳರ ಬಂಧನ ಒಟ್ಟು ಮೌಲ್ಯ 6 ಲಕ್ಷ ಮೌಲ್ಯದ 11 ದ್ವಿಚಕ್ರ ವಾಹನಗಳ ವಶ, ಆರೋಪಿಗಳು ಮತ್ತು ಮಾಲು ಪತ್ತೆ ಕಾರ್ಯದಲ್ಲಿ ಶ್ರಮಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವನ್ನು ಮಾನ್ಯ ಎಸ್.ಪಿ. ಮಂಡ್ಯ ರವರು ಪ್ರಶಂಸಿರುತ್ತಾರೆ

Get News on Whatsapp

by send "Subscribe" to 7200024452
Close Bitnami banner
Bitnami